News Karnataka Kannada
Saturday, May 18 2024
ಉಡುಪಿ

ಸಭ್ಯ ಸಜ್ಜನ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಗೆಲುವು ಖಚಿತ -ಸುಕೇಶ್ ಕುಂದರ್

Decent gentleman candidate Prasad Raj Kanchan is sure to win
Photo Credit : News Kannada

ಉಡುಪಿ: ಪರ್ಕಳ ಸೆಟ್ಟಿಬೆಟ್ಟು ಸರಳೇಬೆಟ್ಟು ಮಣಿಪಾಲ ಈಶ್ವರನಗರ ಈ ಭಾಗದಲ್ಲಿ ನಡೆದ ಕಾರ್ಯಕರ್ತರ ಸಭೆಗಳಲ್ಲಿ ಮುಂದಾಳತ್ವ ವಹಿಸಿದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಕೇಶ್ ಕುಂದರ್  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರನ್ನು ಮನೆಮನೆಗೆ ನಮ್ಮ ಕಾರ್ಯಕರ್ತರು ಹೆಮ್ಮೆಯಿಂದ ಕರೆದುಕೊಂಡು ಹೋಗಿ ವೋಟ್ ಕೇಳಬಹುದು.

ಏಕೆಂದರೆ ಪ್ರಸಾದ್   ವ್ಯಕ್ತಿತ್ವ ಬಹಳ ಉತ್ತಮವಾಗಿದೆ, ಸಚ್ಚಾರಿತ್ರ್ಯ ಹೊಂದಿದ ಇವರು ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯನ್ನು ತಮ್ಮ ವ್ಯಕ್ತಿತ್ವಕ್ಕೆ ಅಂಟಿಕೊಳ್ಳಲು ಬಿಡಲಿಲ್ಲ, ಅದಲ್ಲದೇ ಈಗಾಗಲೇ ಅವರು ಗೆದ್ದ ನಂತರ ಖಂಡಿತವಾಗಿಯೂ ಕಾರ್ಯಕರ್ತರ ಸುಖ ದುಃಖ ಗಳಲ್ಲಿ ಸದಾ ಜತೆ ಇರುತ್ತಾರೆ ಎಂಬ ನಂಬಿಕೆ ನಮಗೆಲ್ಲರಿಗೂ ಬಂದಿದೆ ಅಂದರು.

ಮಣಿಪಾಲ ಭಾಗದಲ್ಲಿ ಈಗಾಗಲೇ ಪ್ರಸಾದ ರವರು ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ಮೂಲಕ ಮಾಡಿದ ಒಳ್ಳೆ ಕೆಲಸಗಳಿಂದ ಜನಪ್ರಿಯರಾಗಿದ್ದಾರೆ ಎಂದರು.

ಕಾರ್ಯಕರ್ತರ ಜತೆ ಈ ಸಂದರ್ಭದಲ್ಲಿ ಸಂವಾದ ನಡೆಸಿದ ಅಭ್ಯರ್ಥಿ ಪ್ರಸಾದ್ ರಾಜ್ ಕಾರ್ಯಕರ್ತರ ವಿಶ್ವಾಸ ಗೆದ್ದರು, ಅವರಲ್ಲಿಯೂ ಮುಂದಿನ ದಿನಗಳಲ್ಲಿ ಬಲಿಷ್ಠ ವಾಗಿ ಪಕ್ಷ ಕಟ್ಟುವ ಭರವಸೆ ಮೂಡಿಸಿದರು.

ನಾಯಕರಾದ ದಿವಾಕರ ಕುಂದರ್,ಕುಶಲ ಶೆಟ್ಟಿ ಅಮೃತ್ ಶೆಣೈ, ಸುರೇಶ್ ಶೆಟ್ಟಿ ಬನ್ನಂಜೆ,ಸದಾಶಿವ ಅಮೀನ್ ಕಟ್ಟೆಗುಡ್ಡೆ, ಪ್ರಶಾಂತ್ ಪೂಜಾರಿ, ಮಹಾಬಲ ಕುಂದರ್, ಮಮತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು