News Karnataka Kannada
Monday, April 29 2024
ಉಡುಪಿ

ಕೊಡೇರಿಯಲ್ಲಿ ಮತ್ತೊಂದು ದೋಣಿ ಅವಘಡ: ಒಂಬತ್ತು ಮಂದಿಯ ರಕ್ಷಣೆ

Another boat capsizes in Kodiri, nine rescued
Photo Credit : News Kannada

ಕುಂದಾಪುರ: ಕೊಡೇರಿ ಸಮುದ್ರ ತೀರದಲ್ಲಿ ಶುಕ್ರವಾರ ಆಗಸ್ಟ್ 5ರಂದು ಮತ್ತೊಂದು ದೋಣಿ ಅವಘಡ ಸಂಭವಿಸಿದೆ. ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್, ಅದರಲ್ಲಿದ್ದ ಎಲ್ಲಾ ಒಂಬತ್ತು ಮೀನುಗಾರರನ್ನು ಇತರ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. 1.5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ದೋಣಿಯಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಮೀನುಗಾರ ಕುಪ್ಪಯ್ಯ ಬಲೆಯಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಕಷ್ಟಪಟ್ಟು ಹೊರತೆಗೆಯಲಾಗಿದೆ. ಮುಳುಗಿದ ಶ್ರೀ ದುರ್ಗಾಪರಮೇಶ್ವರಿ ದೋಣಿಯ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ಆರು ದೋಣಿಗಳ ಮೀನುಗಾರರು ಕಾರ್ಯಪ್ರವೃತ್ತರಾಗಿ ಎಲ್ಲಾ ಮೀನುಗಾರರನ್ನು ರಕ್ಷಿಸಿದ್ದಾರೆ. ಜುಲೈ 31 ರಂದು ಇದೇ ಸ್ಥಳದಲ್ಲಿ ದೋಣಿ ಮಗುಚಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು