News Karnataka Kannada
Monday, April 29 2024
ವಿಶೇಷ

ಕುಂದಾಪುರ: ಹಂದಿ ಸಾಕಣೆ, ತರಕಾರಿ ಬೆಳೆಯಿಂದ ಸ್ವಾವಲಂಬಿ ಬದುಕು, ಮಹಿಳಾ ದಿನದಂದು ಸಾಧಕರ ಪರಿಚಯ

A brave woman who led a self-reliant life
Photo Credit : News Kannada

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ನಿವಾಸಿ  ಪ್ರಿಯಾ  ಪ್ಲೇವಿ ಮೊಂತೆರೊ ಹಂದಿ ಸಾಕಾಣಿಕೆ ಮುಖಾಂತರ ಸ್ವಾಲಂಬಿ ಬದುಕನ್ನು ಕಟ್ಟಿಕೊಂಡ ಧೀಮಂತ ಮಹಿಳೆ.

ಬದುಕಿನಲ್ಲಿ ಏನಾದರೂ ಸಾಧಿಸಬೇಕ್ಕೆನ್ನುವ ತುಡಿತ ಮತ್ತು ಬದುಕಿಗೆ ಆಸರೆ ಆಗಬಲ್ಲ ಎನ್ನುವ ದೃಷ್ಟಿಯಿಂದ ಅವರ ಆಸಕ್ತಿ ಹಂದಿ ಸಾಕಾಣಿಕೆ ಕಡೆಗೆ ಸೆಳೆದಿದೆ.

ಮಾಂಸ ಪ್ರಿಯರು ಕುರಿ, ಕೋಳಿ, ಮೇಕೆ, ಮೀನು ಜತಗೆ ಹಂದಿ ಮಾಂಸವನ್ನು ಕೂಡ ಹೆಚ್ಚಾಗಿ ಇಷ್ಟಪಡುತ್ತಾರೆ. ಈ ಹಿಂದೆ ಹಂದಿ ಮಾಂಸಕ್ಕೆ ಅಷ್ಟೇನೂ ಬೇಡಿಕೆ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಕೂಡ ಕಮ್ಮಿ ಆಗಿತ್ತು. ಇತ್ತೀಚೆಗೆ ಜನರು ಹೆಚ್ಚೆಚ್ಚು ಹಂದಿ ಮಾಂಸವನ್ನು ಸೇವಿಸಲು ಮುಂದಾಗುತ್ತಿದಂತೆ ಮಾರುಕಟ್ಟೆಯಲ್ಲಿ ಕೂಡ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಕೂಡ ಜಾಸ್ತಿ ಆಗಿದೆ. ಹಂದಿ ಸಾಕಾಣಿಕೆ ಉದ್ಯಮವಾಗಿ ರೂಪಗೊಂಡಿದ್ದು ಸಾವಿರಾರು ಜನರನ್ನು ಹಂದಿ ಸಾಕಾಣಿಕೆ ಮುಖಾಂತರ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಸ್ವಾವಲಂಬಿ ಬದುಕಿಗೆ ಸಹಕಾರಿ: ಪ್ರಿಯಾ ಪ್ಲೇವಿ ಮೊಂತೆರೊ ದ್ವೀತಿಯ ಪಿಯುಸಿ ಶಿಕ್ಷಣವನ್ನು ಪಡೆದಿರುವ ವಿದ್ಯಾವಂತ ಮಹಿಳೆ. ಮಹಾಮಾರಿ ಕೊರೊನಾವು ಅವರ ಪತಿಯನ್ನು ಬಲಿ ತೆಗೆದು ಕೊಂಡಾಗ ಅವರ ಬದುಕು ದಿಕ್ಕು ತೋಚದಂತೆ ಆಗಿತ್ತು ಎರಡು ಚಿಕ್ಕ ಮಕ್ಕಳನ್ನು ಸಲಗುವ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿತ್ತು.

ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವನ್ನು ಹೊಂದಿರುವ ಅವರು ತನ್ನ ಗಂಡನೊಂದಿಗೆ 4 ವರ್ಷಗಳ ಹಿಂದೆ ಆರಂಭಿಸಿದ ಹಂದಿ ಸಾಕಾಣಿಕೆಯನ್ನು ಮುಂದುವರೆಸಿಕೊಂಡು ಹೋಗಿದ್ದು ಯಶಸ್ವಿಯಾಗಿ ಜೀವನದಲ್ಲಿ ಹೆಜ್ಜೆಗಳನ್ನು ಇಡುತ್ತಾ ಅಬಲೆಯರಿಗೆ ಮಾದರಿಯಾಗಿದ್ದಾರೆ.

ಆರು ಹಂದಿ ಗೂಡುಗಳನ್ನು ನಿರ್ಮಿಸಿಕೊಂಡು 40 ಕ್ಕೂ ಅಧಿಕ ಹಂದಿಗಳನ್ನು ಸಾಕುತ್ತಿದ್ದಾರೆ ತಾವೇ ಸ್ವತಃ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಪೇಟೆಯ ಹೋಟೆಲ್‍ಗಳಲ್ಲಿ ಸಿಗುವ ವೆಸ್ಟ್ ಫುಡ್ಡ್ ಮತ್ತು ಅನ್ನವನ್ನು ಹಂದಿಗಳಿಗೆ ಆಹಾರವಾಗಿ ನೀಡುತ್ತಾರೆ.

ತಮ್ಮ ಕುಟುಂಬದ ಚಿಕ್ಕ ಹಿಡುವಳಿಯಲ್ಲಿ ಭತ್ತ, ತೆಂಗು,ತರಕಾರಿ, ಮಲ್ಲಿಗೆ,  ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡಿಕೊಂಡು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಸರಿ ಸುಮಾರು ವರ್ಷಕ್ಕೆ 1.50 ಲಕ್ಷ.ರೂ ಆದಾಯ ಗಳಿಸಬಹುದು ಜಾಗದ ಅನುಕೂಲ ಇದ್ದವರು ಹಂದಿ ಸಾಕಾಣಿಕೆಯಲ್ಲಿ ತೊಡಗಿಕೊಳ್ಳ ಬಹುದು ಎನ್ನುತ್ತಾರೆ,  ಸರ್ಕಾರ ಅಧಿಕಾರಿಗಳು ಪ್ರೋತ್ಸಾಹ ನೀಡಿ ಸಬ್ಸಿಡಿ ಹಣವನ್ನು ಒದಗಿಸಿಕೊಡುವಲ್ಲಿ ಸಹಕರಿಸಿದರೆ ಕಿರು ಉದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಬಹುದು ಎನ್ನುವುದು ಪ್ಲೇವಿ ಅವರ ಅನಿಸಿಕೆ ಆಗಿದೆ.

ಕಳೆದ 4 ವರ್ಷಗಳಿಂದ ಹಂದಿ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದೇನೆ ವೆಸ್ಟ್ ಫುಡ್ಡ್ ಮತ್ತು ಅನ್ನವನ್ನು ಹಂದಿಗಳಿಗೆ ಆಹಾರವಾಗಿ ನೀಡಲಾಗುತ್ತಿದೆ. ಆರು ಹಂದಿ ಗೂಡುಗಳನ್ನು ನಿರ್ಮಿಸಿಕೊಂಡು ಹಂದಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇನೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ ಹಂದಿ ಸಾಕಾಣಿಕೆಗೆ ಇನ್ನಷ್ಟು ಉತ್ತೇಜನ ನೀಡಬೇಕಾದರೆ ಸಬ್ಸಿಡಿ ಹಣವನ್ನು ದೊರಕಿಸಿ ಕೊಡುವಲ್ಲಿ ನನಗೆ ಅಧಿಕಾರಿಗಳು ಸಹಕರಿಸಬೇಕು.  ಬದುಕಿಗೆ ಆಸರೆ ಆಗಬಹುದು ಎನ್ನುವ ದೃಷ್ಟಿಯಿಂದ ಹಂದಿ ಸಾಕಾಣಿಕೆ ಮಾಡುತ್ತಿದ್ದೇನೆ ನನಗೆ ಎಲ್ಲರೂ  ಪ್ರೋತ್ಸಾಹ ನೀಡಬೇಕೆಂದು ಪ್ರೀಯಾ ಪ್ಲೇವಿ  ಮೊಂತೆರೊ ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು