ಕಾರ್ಕಳ : ನಗರದ ಬಿ ಟಿ ಕೆ ಪೆಟ್ರೋಲ್ ಬಂಕ್ ಸಮೀಪದ ಸೌಂದರ್ಯ ಕಾಂಪ್ಲೆಕ್ಸ್ ವೊಂದರ ರೂಮ್ ವೊಂದಕ್ಕೆ ಅಕ್ರಮ ಪ್ರವೇಶ ಗೈದು ಜೀವಬೆದರಿಕೆಯೊಡ್ಡಿದ ಆರೋಪಿಯೊಬ್ಬನಿಗೆ ಕಾರ್ಕಳ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿ ಶಿಕ್ಷೆ ಘೋಷಿಸಿದೆ. 2020 ಎಪ್ರಿಲ್ 16ರ ಬೆಳಿಗ್ಗೆ 8 ಗಂಟೆಗೆ ಈ ಘಟನೆ ಸಂಭವಿಸಿತ್ತು.
ಕಾರ್ಕಳ ನಗರದ ಬಿ.ಟಿ.ಕೆ. ಪೆಟ್ರೋಲ್ ಬಂಕ್ ಸಮೀಪ ಇರುವ ಸೌಂದರ್ಯ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ಸುಜನಿ ಮತ್ತು ಸುಧೀರ್ ಪೂಜಾರಿ ಅವರು ವಾಸ್ತವ್ಯ ಇರುವ ಬಾಡಿಗೆ ರೂಮಿಗೆ ಆರೋಪಿ ವಸಂತ ಪೈ ಅಕ್ರಮ ಪ್ರವೇಶ ಮಾಡಿದುದಲ್ಲದೇ, ಸುಜನಿ ಮತ್ತು ಸುಧೀರ್ ಅವರನ್ನು ಉದ್ದೇಶಿಸಿ, “ನೀವು ನನ್ನ ಬಗ್ಗೆ ಅಚ್ಯುತ ಆಚಾರ್ಯರವರಲ್ಲಿ ದೂರು ನೀಡಿ, ನನ್ನನ್ನು ಬಾಡಿಗೆ ಮನೆಯಿಂದ ಎಬ್ಬಿಸಲು ನೋಡುತ್ತಿದ್ದೀರಾ ಎಂದು ಅವಾಚ್ಯ ಶಬ್ದಗಳಿಂದ ನಿಂದನೆಗೈದು, ನನ್ನ ವಿಚಾರಕ್ಕೆ ಬಂದರೆ ನಿಮ್ಮನ್ನು ಕೊಂದು ಬಿಡುವುದಾಗಿ’ ಜೀವಬೆದರಿಕೆ ಹಾಕಿದ್ದರು.
ಈ ಬಗ್ಗೆ ಆರೋಪಿ ಅಚ್ಚುತ ಪೈ ವಿರುದ್ಧ ಕಾರ್ಕಳ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿದ್ದ ಮಧು ಬಿ.ಇ ಅವರು ಕಾರ್ಕಳ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೊಂಡ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಆರೋಪಿಯ ವಿರುದ್ಧದ ಪ್ರಕರಣವು ಸಾಬೀತು. ಆಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿ ವಸಂತ ಪೈ ಅಪರಾಧಿ ಎಂದು ಘೋಷಿಸಿ ರೂ.1,000ದಂಡ, ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಸಜೆ, ಕಲಂ.504 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ರೂ.500 ದಂಡ, ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಸಜೆ, ಕಲಂ.506 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ರೂ.1,000 ದಂಡ ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಸಜೆ, ಶಿಕ್ಷೆಯನ್ನು ಅನುಭವಿಸುವಂತೆ ತೀರ್ಮ ನೀಡಿ ಆದೇಶ ಮಾಡಿರುತ್ತದೆ. ಮತ್ತು ಕಲಂ.357(3), ದಂಡ ಪ್ರಕ್ರಿಯೆ ಸಂಹಿತೆ ಪ್ರಕಾರ ನೊಂದ ಮಹಿಳೆಗೆ ರೂ.1,000ವನ್ನು ಪರಿಹಾರದ ರೂಪದಲ್ಲಿ ಹಣವನ್ನು ನೀಡಿವಂತೆ ಆದೇಶ ಮಾಡಿರುತ್ತಾರೆ.
ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ರಾಜಶೇಖರ ಪಿ ಶಾಮರಾವ್ ಇವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿರುತ್ತಾರೆ.