ಹೆಬ್ರಿ: ಕೇಂದ್ರ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯಿಂದ 2020-21 ನೇ ಸಾಲಿನ ಪ್ರಶಸ್ತಿಗೆ ಹೆಬ್ರಿ ತಾಲೂಕು ಕುಚ್ಚೂರು ಕುಡಿಬೈಲು ‘ಶಾಂತಿನಿಕೇತನ ಯುವವೃಂದ’ ಮಂಡಳಿಯು ಆಯ್ಕೆಯಾಗಿದೆ.
ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡ ಈ ತಂಡಕ್ಕೆ ಮುಂದೆ ರಾಜ್ಯಮಟ್ಟ ಹಾಗೂ ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾಗುವ ಭರವಸೆ ಇದೆ ಎನ್ನುತ್ತಾರೆ ರಾಜೇಶ್ ಹೆಬ್ರಿ.
ಪ್ರಶಸ್ತಿ 25 ಸಾವಿರ ನಗದು ಪ್ರಶಂಸ ಪತ್ರ ಒಳಗೊಂಡಿದೆ ಜನವರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪ್ರಶಸ್ತಿಯನ್ನು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಯ ಪ್ರಕಟಣೆ ತಿಳಿಸಿದೆ