ಹೆಬ್ರಿ: ಸಾಗುವಾನಿ ಮರದ ಹಲಗೆಯ ಮೇಲೆ ಅರ್ಧ ಇಂಚಿನ 1400 ಮೊಳೆ ಹಾಗೂ ಬಣ್ಣದ ದಾರ ಬಳಸಿ ಮೂರು ಅಡಿ ಎತ್ತರದ ಗಣಪತಿಯ ಕಲಾಕೃತಿಯನ್ನು ರಚಿಸಿದ ಹೆಬ್ರಿ ಗುಳಿಬೆಟ್ಟಿನ ರಂಜಿತಾ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದೆ.
ಮಾರ್ಚ್ ನಲ್ಲಿ ದಾಖಲೆಗಾಗಿ ಪ್ರದರ್ಶನ ನಡೆದಿದ್ದು, ಈಗ ಪ್ರಮಾಣ ಪತ್ರ ಕೈ ಸೇರಿದೆ. ಯಂತ್ರ ಬಳಸದೇ ಕೈಯಲ್ಲಿಯೇ ಕಲಾಕೃತಿ ರಚಿಸಿದ್ದು, ಹೆಬ್ರಿಯ ಕಾಷ್ಠಶಿಲ್ಪಿ ಎಚ್. ರಮೇಶ್ ಆಚಾರ್ಯ, ಮೆಂಟಲ್ ತಿಲಕ್ ಮತ್ತು ಹೆಬ್ರಿ ಎಪಿಎಂ ಸಮೂಹ ಸಂಸ್ಥೆಯ ಪ್ರವೀಣ್ ಬಲ್ಲಾಳ್ ವಿಶೇಷ ಸಹಕಾರ ನೀಡಿದ್ದಾರೆ. ಹೆತ್ತವರಾದ ಮೆಕ್ಯಾನಿಕ್ ರಘುರಾಮ ದೇವಾಡಿಗ ಮತ್ತು ಪ್ರಮೀಳಾ ವಿಶೇಷವಾಗಿ ಪ್ರೋತ್ಸಾಹಿಸಿದ್ದಾರೆ ಎಂದು ರಂಜಿತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ದಾಖಲಿಸಲು ಸಿದ್ಧತೆ ನಡೆಸುತ್ತಿರುವ ರಂಜಿತಾ ಹಣಕಾಸು ಸಮಸ್ಯೆ ಎದುರಿಸುತ್ತಿದ್ದು, ಪ್ರಾಯೋಜಕರ ನಿರೀಕ್ಷೆಯಲ್ಲಿದ್ದಾರೆ. ನೆರವಾಗಲು ಬಯಸುವವರು 9019281750 ಸಂಪರ್ಕಿಸಬಹುದು ಎಂದರು.