ಪುತ್ತೂರು: ನವವಿವಾಹಿತೆ ದಿಢೀರ್ ಅಸ್ವಸ್ಥತೆಗೆ ಒಳಗಾಗಿ ಚಿಕಿತ್ಸೆಗೆ ಕೊಂಡು ಹೋಗುವ ವೇಳೆ ಮೃತಪಟ್ಟ ಘಟನೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಪದಡ್ಕ ಎಂಬಲ್ಲಿನ 7 ರಂದು ನಡೆದಿದೆ. ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿ ಪುಷ್ಪ (22) ಮೃತಪಟ್ಟವರು.
ನ.7 ರಂದು ನಸುಕಿನ ಜಾವ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಈಶ್ವರಮಂಗಲದ ಕ್ಲಿನಿಕ್ ಗೆ ಕರೆದುಕೊಂಡು ಬಳಿಕ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪುಷ್ಪಾರವರಿಗೆ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಮೃತರು ತಂದೆ ತಾಯಿ ವತಿ ಸಂತೋಷ್ ಕುಲಾಲ್, ಅತ್ತೆ ಹಾಗೂ ಮಾವನನ್ನು ಅಗಲಿದ್ದಾರೆ, ಪುಷ್ಪಾ ಹೃದಯಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.