Categories: ಮಂಗಳೂರು

ಎಂಆರ್‌ಪಿಎಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ

ಮಂಗಳೂರು: ಎಂಆರ್‌ಪಿಎಲ್‌ ನೌಕರರ ಮನರಂಜನಾ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರಣ್ಯ ಇಲಾಖೆಯ ಡಿಸಿಎಫ್ ಡಾ ವೈ ಕೆ ದಿನೇಶ್ ಕುಮಾರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಡುಂಬು ನದಿಯ ಪರಿಸರ ಪುನಶ್ಚೇತನ ಮತ್ತು ಪುನರುಜ್ಜೀವನಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಎಂಒಯುಗೆ ಸಹಿ ಹಾಕಲು ಎಂಆರ್‌ಪಿಎಲ್ ನಿರ್ಧಾರ ಕೈಗೊಂಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಎಂಆರ್‌ಪಿಎಲ್ ಇಡಿ ರಿಫೈನರಿ ಎಸ್ ಪಿ ಕಾಮತ್, ಪರವಾಗಿ ಮತ್ತು ಡಾ ವೈ ಕೆ ದಿನೇಶ್ ಕುಮಾರ್ ಅವರು ಕರ್ನಾಟಕದ ಅರಣ್ಯ ಇಲಾಖೆ ಪರವಾಗಿ ಎಂಒಯುಗೆ ಸಹಿ ಹಾಕಿದರು.

ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳು ‘ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ’ ಎಂಬ ವಿಷಯದ ಕುರಿತು ಬೀದಿನಾಟಕವನ್ನು ಪ್ರಸ್ತುತಪಡಿಸಿದರು.

ಕೆಎಸ್‌ಪಿಸಿಬಿಯ ಪರಿಸರ ಅಧಿಕಾರಿ ಡಾ.ರವಿ ಡಿಆರ್‌ ಮಾತನಾಡಿ, ‘ಪರಿಸರ ಸಂರಕ್ಷಣೆಗಾಗಿ ನಾವು ಜಾಗೃತರಾಗಬೇಕು’ ಎಂದರು. ಐಎಫ್‌ಎಸ್‌ ಸಿವಿಒ ಗಣೇಶ್ ಎಸ್ ಭಟ್, ಮಾತನಾಡಿದರು. ವೈಯಕ್ತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ಪ್ರಸ್ತಾಪಿಸಿದರು.

ಕುಡುಂಬೂರು ನದಿ ಪುನರುಜ್ಜೀವನದ ಯೋಜನೆಗೆ ಕೊಡುಗೆ ನೀಡಲು ಹಣಕಾಸು ನಿರ್ದೇಶಕರಾದ ವಿವೇಕ್ ಸಿ ಟೊಂಗಾಂವ್ಕರ್ ಸಂತೋಷ ವ್ಯಕ್ತಪಡಿಸಿದರು. ಸಂಸ್ಕರಣಾಗಾರ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ವರ್ಮಾ, ಮಾತನಾಡಿ, “ನಾವು ನಮ್ಮ ಭೂಮಿಯನ್ನು ತಾಯಿಯ ಭೂಮಿ ಎಂದು ಕರೆಯುತ್ತೇವೆ. ಈಗ ನಾವು ಭೂಮಿಯನ್ನು ನಮ್ಮ ತಾಯಿಯ ರೀತಿ ನೋಡಿಕೊಳ್ಳಬೇಕು.

ಹವಾಮಾನ ಬದಲಾವಣೆಯಿಂದಾಗಿ ನಮ್ಮ ಭೂಮಿಯಲ್ಲಿ ವೈಪರೀತ್ಯಗಳು ಸಂಭವಿಸುತ್ತಿವೆ. ನೀರಿನ ಲಭ್ಯತೆ ಕ್ಷೀಣಿಸಿದೆ ಎಂದರು. ಈ ನಿಟ್ಟಿನಲ್ಲಿ ತ್ಯಾಜ್ಯ ಸಮರ್ಪಕ ನಿರ್ವಹಣೆ ಅಗತ್ಯ ಎಂದರು.
ಎಂ.ಎಸ್.ಪವಿತ್ರಾ, ಇಂಜಿನಿಯರ್ ಎಚ್.ಎಸ್.ಇ ಬಹುಮಾನ ವಿತರಣೆ ಸಂಯೋಜಿಸಿದರು. ಕಾಂಚನ್ ದೇಶವಾಲ್ ನಿರೂಪಿಸಿದರು. ಪ್ರಸನ್ನ ಕುಮಾರ್ ಪ್ರಸ್ತಾಪಿಸಿದರು.

Ashika S

Recent Posts

ಯುವ ನವದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಯುವ ನವ ದಂಪತಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

30 mins ago

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಾಯಿ ನಿಧನ

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಮಾಧವಿ ರಾಜೇ ಸಿಂಧಿಯಾ ದೆಹಲಿ ಏಮ್ಸ್‌ನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲದಿನಗಳಿಂದ…

40 mins ago

ಪ್ರಬೀರ್ ಪುರಕಾಯಸ್ಥ ಬಂಧನ ಸರಿಯಾದ ಕ್ರಮವಲ್ಲ ಎಂದ ಸುಪ್ರೀಂ

ನ್ಯೂಸ್‌ ಕ್ಲಿಕ್‌ ಸುದ್ಧಿ ತಾಣದ ಸಂಸ್ಥಾಪಕರಾದ ಪ್ರಬೀರ್ ಪುರಕಾಯಸ್ಥ ಅವರನ್ನು ‘ಅಕ್ರಮ ಚಟುವಟಿಕೆ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು…

46 mins ago

ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರು ಚಪ್ಪಲಿನಲ್ಲಿ ಹೊಡೆದಾಟ

ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೀದರ್‌ನಿಂದ ಕಲಬುರಗಿ ಬಸ್‌ನಲ್ಲಿ ಶಕ್ತಿ ಯೋಜನೆ ಅಡಿ ಉಚಿತ…

50 mins ago

ಹುಟ್ಟು ಹಬ್ಬದ ಸಂಭ್ರಮದಲ್ಲಿ ʼದಿಲ್ ತೋ ಪಾಗಲ್ ಹೈʼ ನಟಿ ಮಾಧುರಿ ದೀಕ್ಷಿತ್

ಬಾಲಿವುಡ್ ಚಿತ್ರರಂಗದ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ ಇಂದು ತಮ್ಮ 57ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.  ಚಿತ್ರರಂಗದಲ್ಲಿ ನಟಿ ಮಾಧುರಿ…

60 mins ago

ಮೋದಿ ಈಗಾಗಲೇ ಪೂರ್ಣ ಬಹುಮತ ಪಡೆದಿದ್ದಾರೆ ಎಂದ ಅಮಿತ್‌ ಶಾ

ಮೋದಿ  ಈಗಾಗಲೇ ಪೂರ್ಣ ಬಹುಮತ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

1 hour ago