Categories: ಮಂಗಳೂರು

ಮಂಗಳೂರು: ವೇದವ್ಯಾಸ್ ಗೆ ತೀವ್ರ ಸ್ಪರ್ಧೆ ನೀಡಲಿದ್ದಾರೆಯೇ ಡಾ. ಸುಮತಿ ಎಸ್ ಹೆಗ್ಡೆ

ಮಂಗಳೂರು:  ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ವೇದವ್ಯಾಸ್ ಕಾಮತ್ ಗೆ ಈ‌ ಬಾರಿ ಪ್ರಬಲ ಪೈಪೋಟಿ ನೀಡಲು ಜನತಾದಳ ( ಜಾ) ಪಕ್ಷದಿಂದ ಕಣಕ್ಕೆ ಇಳಿದಿರುವ ಲಯನ್ಸ್ ಡಿಸ್ಟ್ರಿಕ್ಟ್ ಚೇರ್ಮೆನ್ , ದ.ಕ. ಜಿಲ್ಲಾ ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಡಾ. ಸುಮತಿ ಎಸ್ ಹೆಗ್ಡೆ ಸಿದ್ಧರಾಗಿದ್ದು, ಪ್ರಬಲ ಪೈಪೋಟಿ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಸುಮತಿ ಹೆಗ್ಡೆ ಸ್ಪರ್ಧೆಗೆ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಸಿರು ನಿಶಾನೆ ತೋರಿದ್ದು‌ ಇವರ ಪಕ್ಷ ಸಂಘಟನೆ ಚಾತುರ್ಯಕ್ಕೆ ಫಿದಾ ಆಗಿದ್ದಾರೆ. ಡಾ.‌ಸುಮತಿ ಎಸ್ ಹೆಗ್ಡೆ ಸಾಮಾಜಿಕ  ಕ್ಷೇತ್ರದಲ್ಲಿ  ಸುಮಾರು 2020 ರಿಂದ‌ ( 4 ವರುಷಗಳಿಂದ) ತೊಡಗಿಸಿಕೊಂಡು ಜನರ ಸಮಸ್ಯೆಗಳಿಗೆ ಪರಿಹಾರ ರೂಪಿಸಿ ಎಲ್ಲರ ಮನೆ ಮಾತಾಗಿದ್ದಾರೆ.

ಬಹುತೇಕ ಬಿಜೆಪಿಯ‌ ಮತಗಳನ್ನೇ ಸೆಳೆಯಬಲ್ಲ ಇವರಿಗೆ ಜಾತಿ ಮತ ಬೇಧ ಮರೆತು ಸರ್ವ ಜನರ  ಮತಗಳಿಕೆ ಸಾಮರ್ಥ್ಯವಿದೆ.   ಮನೆ‌ ಮನೆಗೆ ಭೇಟಿ ನೀಡಿದ‌ ಸಂದರ್ಭ ಬೇರೆ‌ ಪಕ್ಷದವರು‌ ( ನಾವು ಬಿಜೆಪಿ, ನಾವು ಕಾಂಗ್ತೆಸ್ ) ನಾವು ನಿಮ್ಮ ಪಕ್ಷ ನೋಡಿ ಮತ ಹಾಕುವುದಿಲ್ಲ. ನಿಮ್ಮ ವೈಯಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ನಿಮಗೆ ವೋಟು ನೀಡುತ್ತೇವೆ ಎನ್ನುತ್ತಾರೆ. ಇದು ಜನರು ಅವರ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ವೈಯಕ್ತಿಕ ವರ್ಚಸ್ಸು ಹೊಂದಿದ, ಜನರ ನಾಡಿಮಿಡಿತ ಅರಿತ ನಾಯಕಿ: ಸುಮತಿ ಅವರ ವೈಯಕ್ತಿಕ ವರ್ಚಸ್ಸು ವರ್ಕೌಟ್ ಆಗುತ್ತಿದ್ದು,‌‌ ವಿನಯ , ಆತ್ಮೀಯತೆ ಹಾಗೂ ಜನಸೇವೆಯ ಧ್ರಢ‌ ಸಂಕಲ್ಪ ಜನರನ್ನು ಆಕರ್ಷಿಸುತ್ತಿದೆ. ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ವತಿಯಿಂದ  ಜನತಾ ಜಲಧಾರೆ‌ ಹಾಗೂ‌ ಪಂಚರತ್ನ ಯೋಜನೆಗಳ ವಾಹನ ಜಾಥಾ ಕೈಗೊಂಡು, ದ.ಕ.‌ಜಿಲ್ಲೆಯಲ್ಲಿ‌ ನೆಲೆಯಿಲ್ಲದ ಜೆಡಿಎಸ್  ಪಕ್ಷಕ್ಕೆ ಮರುಜೀವ ನೀಡಿದ್ದಾರೆ.   ಬೆಂಗರೆ ,‌ ಪಾಂಡೇಶ್ವರ ,‌ ಬಂದರ್, ಪಡೀಲ್ , ಜೆಪ್ಪು, ಬಜಾಲ್, ಬಿಕರ್ನಕಟ್ಟೆ, ಕಣ್ಣೂರು ಪ್ರದೇಶಗಳ  ಅಲ್ಪಸಂಖ್ಯಾತ ಮತಗಳ ಪ್ರಮಾಣ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆಯ ನಂತರ ಚುನಾವಣಾ ಕಣದ ನಿಜವಾದ ಚಿತ್ರಣ ಹೊರಬೀಳಲಿದೆ.‌

ರಾಷ್ಟ್ರೀಯ ಪಕ್ಷಗಳಿಗೆ ಸುಮತಿ ಸ್ಪರ್ಧೆ ಬಿಸಿತುಪ್ಪ: ರಾತ್ರಿ ಹಗಲೆನ್ನದೆ‌ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಜಯಗಳಿಸುವ ವಿಶ್ವಾಸ ಹೊಂದಿದ್ದಾರೆ. ಕೊನೆಕ್ಷಣದಲ್ಲಿ ವೀರ ಸೋಲು ಕಂಡರೂ  ದ.ಕ.‌ಜಿಲ್ಲಾ ಜೆಡಿಎಸ್ ನಾಯಕರಿಗೆ ಗೌರವ ತರುವುದರಲ್ಲಿ ಎರಡು ಮಾತಿಲ್ಲ.  ಈ‌ ಕ್ಷೇತ್ರದ ಶೇ 70 ರಷ್ಟು ಮಹಿಳೆಯರು ಈ ಬಾರಿ ಸುಮತಿ ಮೇಡಂ ಗೆ ಮತನೀಡಲು ನಿರ್ಧರ್ಸಿರುವುದೂ ಕುಡಾ‌ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿದೆ. ಒಟ್ಟಿನಲ್ಲಿ ಗ್ರೌಂಡ್ ರಿಯಾಲಿಟಿ ಪ್ರಕಾರ ಎರಡು ರಾಷ್ಟ್ರೀಯ ಪಕ್ಷಗಳಿಗೆ ಮಂಗಳೂರು ದಕ್ಷಿಣದಲ್ಲಿ ಜೆಡಿಎಸ್ ಈ ಬಾರಿ ಪ್ರಬಲ ಪೈಪೋಟಿ ನೀಡುವುದರಲ್ಲಿ ಎರಡು ಮಾತಿಲ್ಲ.

Sneha Gowda

Recent Posts

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

3 mins ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

17 mins ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

40 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

1 hour ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

1 hour ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

1 hour ago