ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಅವರು ಡೊಂಗರಕೇರಿ ವಾರ್ಡಿನ ಮಹಮ್ಮಾಯಿ ದೇವಸ್ಥಾನ ರಸ್ತೆ ಹಾಗೂ ಅಳಕೆ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಜನ್ ದಾಸ್ ಕುಡುಪು, ರಮೇಶ್ ಹೆಗ್ಡೆ, ಜಯಶ್ರೀ ಕುಡ್ವ, ಶ್ರೀನಿವಾಸ್ ಶೇಟ್, ಕೃಷ್ಣಪ್ರಸಾದ್ ಶೆಟ್ಟಿ, ರಮಣ್ ಮೋಹನ್, ದೇವಾನಂದ ಶೆಣೈ, ಅರುಣ್ ಜಿ. ಶೇಟ್, ರೂಪೇಶ್ ಶೇಟ್, ಪುಷ್ಪಾ ಶೆಟ್ಟಿ, ನಾಗೇಶ್ ದೇವಾಡಿಗ, ಗೋಪಾಲ್ ಶೇಟ್, ಜನಾರ್ದನ್ ಕುಡ್ವ, ಶ್ರೀಕಾಂತ್ ಶೆಣೈ, ಅಕ್ಷತ್ ಕಾಮತ್, ಲಕ್ಷ್ಮಿ ಪ್ರಕಾಶ್ ಶೆಟ್ಟಿ, ವಿನಾಯಕ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.