ಮಂಗಳೂರು: ಕರಾವಳಿಯ ಸುಳ್ಯ, ಪುತ್ತೂರು, ಬೈಂದೂರು, ಉಳ್ಳಾಲದ ಕೆಲ ಪ್ರದೇಶಗಳು ಮತದಾನ ಬಹಿಷ್ಕಾರದಂತಹ ಘಟನೆಗಳು ವರದಿಯಾಗುವ ಮೂಲಕ ಆಡಳಿತಾರೂಢ ಬಿಜೆಪಿಯ ಅಭಿವೃದ್ಧಿ ಅಜೆಂಡಾವನ್ನೇ ಅಣಕಿಸುವಂತಾಗಿತ್ತು. ಈಗ ಅದೇ ಸಾಲಿಗೆ ಮಂಗಳೂರು ನಗರದ ಬಿಜೈ ಪ್ರದೇಶವೂ ಸೇರುವಂತಾಗಿದೆ.
ಬಿಜೈ ನ್ಯೂರೋಡ್ 5ನೇ ಕ್ರಾಸ್ನಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಜನರು ಪರದಾಡುವಂತಾಗಿದೆ. ಅಲ್ಲದೆ ದುರಸ್ತಿಯಾಗದೆ ಪಾದಚಾರಿಗಳು, ವಾಹನ ಸವಾರರು ನಿತ್ಯ ಸ್ಥಳೀಯ ಆಡಳಿತ, ಜನಪತ್ರಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯರು ಪ್ರತಿಭಟನೆಗೆ ಸಿದ್ಧರಾಗಿದ್ದು, ಈ ಸಂಬಂಧ ಬ್ಯಾನರ್ ಅಳವಡಿಸಿದ್ದು ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.
ಬಿಜೈ ರಾಮಕೃಷ್ಣ ಭಜನಾ ಮಂದಿರದ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದೇ ಹೋದಲ್ಲಿ ಪ್ರತಿಭಟನೆ, ಚುನಾವಣಾ ಬಹಿಷ್ಕಾರ ಮಾಡುವುದಾಗಿ ಬಿಜೈ ನ್ಯೂರೋಡ್ 5ನೇ ಕ್ರಾಸ್ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪಾಲಿಕೆ ಆಡಳಿತ, ಜನಪ್ರತಿನಿಧಿಗಳ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.