ಮಂಗಳೂರು

ಉಜಿರೆ: ಸೆ.30ರಂದು ಓಶಿಯನ್ ಪರ್ಲ್ ಹೋಟೆಲ್ ಉದ್ಘಾಟನೆ

ಉಜಿರೆ: ಅಥಿತಿ ಸೇವೆಗೆ ಮತ್ತು ಉತ್ತಮ ಗುಣ ಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್ ಓಶಿಯನ್ ಪರ್ಲ್, ಉಜಿರೆಯಲ್ಲಿ ಸೆ.30 ರಂದು ತನ್ನ 4ನೇ ಶಾಖೆಯನ್ನು ತೆರೆಯಲಿದೆ.

ಓಶಿಯನ್ ಪರ್ಲ್ ಹೋಟೆಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ ದಿ ಓಶಿಯನ್ ಪರ್ಲ್, ಮಂಗಳೂರು, ದಿ ಓಶಿಯನ್ ಪರ್ಲ್, ಉಡುಪಿ ಮತ್ತು ದಿ ಓಷಿಯನ್ ಪರ್ಲ್ ಇನ್, ಮಂಗಳೂರು ತಮ್ಮ 4 ನೇ ಶಾಖೆಯನ್ನು ಆರಂಭಿಸಲು ಹೆಮ್ಮೆಪಡುತ್ತಿದೆ. ಸೆ.30 ರಂದು ಉಜಿರೆಯಲ್ಲಿ ತಮ್ಮ ಹೊಸ ಹೋಟೆಲ್ ಉದ್ಘಾಟನೆಯೊಂದಿಗೆ ತನ್ನ ಐಷಾರಾಮಿ ಹೋಟೆಲ್‌ಗಳ ನಿರ್ವಹಣೆಗೆ ಹೊಸ ಮುಕುಟವನ್ನು ಸೇರ್ಪಡೆ ಗೊಳಿಸಿದಂತ್ತಾಗುತ್ತದೆ.

ಓಶಿಯನ್ ಪರ್ಲ್ ವ್ಯವಹಾರ ಸಂಸ್ಥೆ, ಹೊಟೇಲ್‌ಗಳ ರೆಸ್ಟೊರೆಂಟ್ ವ್ಯವಹಾರಕ್ಕೆ ಮುನ್ನುಗ್ಗುವ ಮೂಲಕ ಔಟ್ ಡೋರ್ ಕ್ಯಾಟರಿಂಗ್ ಸೇವೆಗಳು,  ಔತಣಕೂಟ, ಕ್ಯಾಂಟೀನ್ ಗಳ ನಿರ್ವಹಣೆ ನಡೆಸುತ್ತಿದ್ದು, ಈ ಸಂಸ್ಥೆ ಹಾಸ್ಪಿಟಾಲಿಟಿ ಉದ್ಯಮದ ದಿಗ್ಗಜ ಜಯರಾಮ್ ಬನಾನ್ ಅವರಿಗೆ ಸೇರಿರುವ ಪ್ರತಿಷ್ಠಿತ ಜೆಆರ್ ಬಿ ಗ್ರೂಪ್‌ಗೆ ಸೇರಿದೆ.

ಗ್ರೂಪ್‌ ಸಾಗರ್ ರತ್ನ ಬ್ರಾಂಡ್‌, ಸಸ್ಯಾಹಾರಿ ರೆಸ್ಟೋರೆಂಟ್‌ಗಳ ಸರಪಳಿಯ ಮೂಲಕ 150 ಕ್ಕೂ ಹೆಚ್ಚು ಶಾಖೆಗಳನ್ನು ಹೆಚ್ಚಾಗಿ ದೇಶದ ಉತ್ತರ ರಾಜ್ಯಗಳಾದ್ಯಂತ ಹೊಂದಿದ್ದು, ದೆಹಲಿಯ ಎನ್ ಸಿಟಿ ಪ್ರದೇಶ ಸಹಿತ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವವನ್ನು ಹೊಂದಿರುವುದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಮತ್ತು ಅತಿದೊಡ್ಡ ಸರಪಳಿ ಎಂದು ಪರಿಗಣಿಸಲ್ಪಟ್ಟಿದೆ.

ಓಶಿಯನ್ ಪರ್ಲ್ ಹುಬ್ಬಳ್ಳಿಯಲ್ಲಿ ದಿ ಓಶಿಯನ್ ರೆಸಾರ್ಟ್ ಮತ್ತು ಸ್ಪಾ ಜೊತೆಗೆ, ಮಂಗಳೂರು ನಗರದ ಪ್ರತಿಷ್ಠಿತ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಕೂಡ ನಿರ್ವಹಣೆ ಮಾಡುತ್ತಿದೆ.

ರಾಷ್ಟ್ರ ರಾಜಧಾನಿಯ ದೆಹಲಿಯಲ್ಲಿ ಚತ್ತರ್‌ಪುರ ಮಂದಿರ ರಸ್ತೆಯಲ್ಲಿರುವ ದಿ ಓಷನ್ ರಿಟ್ರೀಟ್ ಮತ್ತು ಓಶಿಯನ್ ಪರ್ಲ್ ಗಾರ್ಡೆನಿಯಾ ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ಅತ್ಯುತ್ತಮ ಗುಣಮಟ್ಟದ ಔತಣ ಕೂಟದ ಸೇವೆಗೆ ಹೆಸರುವಾಸಿಯಾಗಿದೆ.

ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಧರ್ಮಸ್ಥಳದ ಬಳಿ ಇರುವ. ಉಜಿರೆಯ ಪಟ್ಟಣದ ಲಲಿತಾ ನಗರದ ಬಳಿ ಇದೀಗ ಓಶಿಯನ್ ಪರ್ಲ್, ಸಂಸ್ಥೆ ತನ್ನ ಮುಕುಟಕ್ಕೆ ಇನ್ನೊಂದು ವಜ್ರ ಎಂಬಂತೆ ತನ್ನ ನೂತನ ಹೋಟೆಲನ್ನು ತೆರೆಯಲಿದೆ. (ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಬಳಿ) ಇದು 3 ಮಹಡಿಗಳ ಐಷಾರಾಮಿ ಹೋಟೆಲ್ ಆಗಿದ್ದು 34 ಕೊಠಡಿಗಳನ್ನು ಹೊಂದಿದೆ.ಇಲ್ಲಿ 34 ರೂಮ್ಗಳಿದ್ದು 31ಸೂಟು ರೂಮ್ ಗಳು, 2 ಸೂಟ್ ರೂಮ್ ಗಳು ಮತ್ತು 1ಪ್ರೆಸಿಡೆಂಟ್ ಸೂಟ್ ರೂಮ್ ಅನ್ನು ಹೊಂದಿದೆ.

ಇಲ್ಲಿ ದೊರೆಯುವ ಸೇವೆಗಳು.

ಪೆಸಿಫಿಕ್- ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್. ‘ಸಾಗರ ರತ್ನ’ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್, 140 ಮಂದಿಯ ಆಸನ ವ್ಯವಸ್ತೆಯ ಸಾಮರ್ಥ್ಯ ಹೊಂದಿದ್ದು, 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಅನ್ನು ಹೊಂದಿದೆ.

ಜಿಮ್
ಓಶಿಯನ್ ಪರ್ಲ್ ಜಿಮ್, ದೇಹ ದಾರ್ಡ್ಯತೆಯ ಉತ್ಸಾಹಿ ಜನರ ಗುಣಮಟ್ಟದ ಜೀವನಕ್ಕೆ, ತಮ್ಮ ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ.

ಓಶಿಯನ್ ಪರ್ಲ್  ಹೋಟೆಲ್
ಬೆಳ್ತಂಗಡಿ ಮೂಲದ  ಶಶಿಧರ್ ಶೆಟ್ಟಿಯವರ ಒಡೆತನದಲ್ಲಿದೆ. ಮೂರು ದಶಕಗಳಿಗೂ ಮೀರಿದ ಅನುಭವ ಮತ್ತು ಪರಿಣತಿಯೊಂದಿಗೆ ಆಹಾರ ಸೇವೆಯ (ಕ್ಯಾಟರಿಂಗ್) ಉದ್ಯಮದಲ್ಲಿ ಮಾನ್ಯತೆ ಪಡೆದ ಪ್ರಭಾವಿ ಉದ್ಯಮಿಯಾಗಿದ್ದಾರೆ. ಅವರು ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಮತ್ತು ಅಧ್ಯಕ್ಷರಾಗಿದ್ದಾರೆ. ಜೊತೆಗೆ ದೇಶದ ಸುಮಾರು 12 ರಾಜ್ಯಗಳಲ್ಲಿ ಹರಡಿರುವ ಪ್ರಸಿದ್ಧ ಕೈಗಾರಿಕಾ ಸಮೂಹ ಸಂಸ್ಥೆಗಳ ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದಾರೆ. ಓಶಿಯನ್ ಪರ್ಲ್ ಹೋಟೆಲ್ ಉಜಿರೆಯ ಹಾಸ್ಪಿಟಾಲಿಟಿ ಸಂಸ್ಥೆಯು ಹೋಟೆಲ್ ಇಂಡಸ್ಟ್ರಿಯಲ್ಲಿ ಇರುವ ಎರಡು ಜಂಟಿ ದಿಗ್ಗಜರ ಉದ್ಯಮವಾಗಿದೆ. ಅಂದರೆ ಜಯರಾಮ್ ಬನಾನ್ ಮತ್ತು ಶಶಿಧರ್ ಶೆಟ್ಟಿ 75 ವರ್ಷಗಳ ಸಂಯೋಜಿತ ಅನುಭವದ ಫಲ ದೊಂದಿಗೆ ಓಶಿಯನ್ ಪರ್ಲ್, ಉಜಿರೆಯಲ್ಲಿ ಶುಭಾರಂಭ ಗೊಳ್ಳಲಿದೆ.

ಶಶಿಧರ ಶೆಟ್ಟಿಯವರ ಮಾತೃಶ್ರಿ ಯಾವರಾದ ಶ್ರೀಮತಿ ಕಾಶಿ ಶೆಟ್ಟಿಯವರು, ಸೆ.30ರ ಶುಕ್ರವಾರದಂದು ಉದ್ಘಾಟಿಸಲಿದ್ದಾರೆ.

ಪ್ರಸಿದ್ಧ ಧರ್ಮಸ್ಥಳ ಮಂಜುನಾಥನ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ, ಉಜಿರೆಯಲ್ಲಿರುವ ಸಾಗರದ ಮುತ್ತು ಓಶಿಯನ್ ಪರ್ಲ್ ಹೊಸ ಭಾಷ್ಯವಾಗುವ ನಿರೀಕ್ಷೆಯಿದೆ. ಅಲ್ಲದೆ ಇದು ಜೆಆರ್ ಬಿ ಗ್ರೂಪ್‌ನ ನಿಷ್ಠಾವಂತ ಗ್ರಾಹಕರಿಗೆ ಮತ್ತು ತಮ್ಮ ಉತ್ತಮ ನಿರ್ವಹಣೆಯ ಆಶಯಗಳಿಗೆ ಇದು ನಮ್ಮ ವಿನಮ್ರ ಕೊಡುಗೆಯಾಗಿದೆ. ಜೊತೆಗೆ ಸದಾ ರಾಜ್ಯದ ಪ್ರಜ್ಞಾವಂತ ಜನರ ನಿರಂತರ ಪ್ರೀತಿ ಮತ್ತು ವಾತ್ಸಲ್ಯವನ್ನು ನಿರೀಕ್ಷಿಸುತ್ತಿದೆ ಎಂದರು. ಗ್ರೂಪ್‌ನ ಪ್ರಾಜೆಕ್ಟ್ ಮುಖ್ಯ ಪ್ರಬಂಧಕ ಶಿವಕುಮಾರ್, ಉಜಿರೆ ಹೋಟೆಲ್‌ನ ಮುಖ್ಯ ಪ್ರಬಂಧಕ ನಿತ್ಯಾನಂದ ಮೊಂಡೆಲ್ ಇದ್ದರು.

Gayathri SG

Recent Posts

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

15 mins ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

40 mins ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

1 hour ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

2 hours ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

3 hours ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

3 hours ago