Categories: ಮಂಗಳೂರು

ಉಜಿರೆ: ಶಾಸ್ತ್ರೀಯ ಸಂಗೀತ, ಇಹಪರದ ದೈವಿಕ ಸಂಗೀತ ಸಮೀಕರಣ

ಉಜಿರೆ: ಸಾಮಾನ್ಯರ ತಿಳಿವಿಗೆಟುಕದ ಆಧ್ಯಾತ್ಮದ ತತ್ವಗಳು ಶಾಸ್ತ್ರೀಯ ರಾಗದ ಆಲಾಪದೊಂದಿಗೆ ಸಂಗೀತಸ್ವರಗಳ ಮೂಲಕ ಪ್ರಸ್ತುತಪಡಿಸಲ್ಪಟ್ಟರೆ ಹೇಗಿರುತ್ತದೆ? ಹಾಗಾದರೆ ಕಠಿಣ ಆಧ್ಯಾತ್ಮ ಸರಳವಾಗುತ್ತದೆ. ಕೇಳುವವರೊಳಗೆ ಆತ್ಮ-ಪರಮಾತ್ಮದ ಕುರಿತು ತಿಳಿದುಕೊಳ್ಳುವ ಕುತೂಹಲವನ್ನು ಹುಟ್ಟಿಸುತ್ತದೆ.

ಧರ್ಮಸ್ಥಳದ ವಸ್ತುಪ್ರದರ್ಶನ ಮಂಟಪದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಇಂತಹದೊಂದು ಪ್ರಭಾವ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಕನಕದಾಸ ವಿರಚಿತ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ಪ್ರಶ್ನಾರ್ಥಕ ಸಾಲುಗಳೊಂದಿಗಿನ ಕಾವ್ಯದ ಮಾಧುರ್ಯಪೂರ್ಣ ಪ್ರಸ್ತುತಿಯ ಮೂಲಕ ವಿದುಷಿ ಅನುರಾಧ ಅಡ್ಕಸ್ಥಳ ಆಧ್ಯಾತ್ಮ ಚಿಂತನೆಯ ಸೊಗಡನ್ನು ಹರಡಿದರು.

ಇಹಪರದೊಂದಿಗಿನ ದೈವಿಕ ಸಂಯೋಗದ ಶ್ರೇಷ್ಠತೆಯನ್ನು ಸಾರುವ ಕನಕದಾಸರ ಈ ಪದವನ್ನು ತಮ್ಮ ಶಾಸ್ತ್ರೀಯ ಧ್ವನಿಮಾಧುರ್ಯದ ಮೂಲಕ ಹಾಡಿ ವಿದುಷಿ ಅನುರಾಧ ಅಲ್ಲಿದ್ದವರನ್ನು ಸೆಳೆದರು. ಇಹದ ಪ್ರತಿಯೊಂದು ಅಸ್ತಿತ್ವದೊಂದಿಗೆ ದೈವಿಕತೆಯು ಸಮೀಕರಣಗೊಂಡ ಸೌಂದರ್ಯವನ್ನು ತಮ್ಮ ಧ್ವನಿಯ ಮೂಲಕ ಅವರು ಅನಾವರಣಗೊಳಿಸಿದರು. ಸತತ ಒಂದು ಗಂಟೆಗಳ ಕಾಲ ಜರುಗಿದ ಸಂಗೀತ ರಸದೌತಣ ಕಲಾ ಆರಾಧಕರ ಗಮನ ಸೆಳೆಯಿತು.

ಈ ಸಂಗೀತ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪುತ್ತೂರು(ಮೃದಂಗ), ಬಾಲರಾಜ್ ಕಾಸರಗೋಡು (ವಯೋಲಿನ್) ಅಮೃತ ನಾರಾಯಣ ಹೊಸಮನೆ (ಮೋರ್ಸಿಂಗ್) ಹಾಗೂ ಶರಧಿ ಅಡ್ಕಸ್ಥಳ (ವೀಣೆ) ಸಾತ್ ನೀಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ರಾಗ ತಾಳಗಳಾದ ಬಹುದಾರಿ ರಾಗ, ಆದಿತಾಳ ಶ್ರೀ ಗುರು ರಮಣ . ರಾಗ ದ್ವಿಜಾವಂತಿ, ಆದಿತಾಳ, ರಾಗ ಅಭೇರಿ, ಆದಿತಾಳ ಹೀಗೆ ವಿವಿಧ ರಾಗ ತಾಳಗಳಿಂದ ಕಲಾರಸಿಕರ ಮನಸೆಳೆಯಿತು.

ವರದಿ: ಐಶ್ವರ್ಯ ಕೋಣನ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ
ಚಿತ್ರಗಳು: ಶಶಿಧರ ನಾಯ್ಕ

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

4 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

4 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

6 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

6 hours ago