ಮಂಗಳೂರು/ಉಡುಪಿ: ಈ ಹಿಂದೆ ಟೊಮೆಟೊ ಬೆಲೆ ಕೆಜಿಯೊಂದಕ್ಕೆ 200 ರೂ.ಗಳಿಗೆ ಏರಿಕೆ ಕಂಡು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಇದೀಗ ಟೊಮೆಟೊ ದರ ಕುಸಿದು ಪಾತಾಳಕ್ಕಿಳಿದಿದೆ.
ಆದರೇ ಈಗ ಕರಾವಳಿ ಜಿಲ್ಲೆಗಳಲ್ಲಿ ಬಾಳೆಹಣ್ಣಿನ ದರ ವಿಪರೀತ ಏರಿಕೆಯಾಗಿದೆ. ಪೂರೈಕೆ ವ್ಯತ್ಯಯ ಹಾಗೂ ಹಬ್ಬ ಹರಿದಿನಗಳ ಕಾರಣ ಬಾಳೆಹಣ್ಣಿನ ಬೆಲೆ ಏರಿಕೆ ಕಂಡಿದೆ. ಹೀಗಾಗಿ ಸಾರ್ವಜನಿಕರು ಹೆಚ್ಚಿನ ಬೆಲೆ ನೀಡಿ ಮಾರುಕಟ್ಟೆಯಲ್ಲಿ ಹಣ್ಣು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಮಂಗಳೂರಿನಲ್ಲಿ ಕದಳಿ ಹಣ್ಣಿನ ಬೆಲೆ ಕಿಲೋಗೆ 120 ರೂ. ದಾಟಿದ್ದು, ಉಡುಪಿಯಲ್ಲಿ 115-120 ರೂ. ಈ ತಿಂಗಳ ಅಂತ್ಯದವರೆಗೂ ಹಣ್ಣಿನ ಬೆಲೆ ಹೆಚ್ಚಿರುವ ಸಾಧ್ಯತೆ ಇದೆ.