ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನೆ ಮಹಾಲಕ್ಷ್ಮೀ ಈ ಹಿಂದೆ ಪುಟ್ ಬಾಲ್ ಆಡಿ, ಕ್ರಿಕೆಟ್ ಆಡಿ,ತಾನೇ ನೀರಿನ ಪೈಪ್ ಹಿಡಿದು ಸ್ಥಾನ ಮಾಡಿ ಗಮನ ಸೆಳೆದಿತ್ತು. ಇಂದು ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ದೇವಸ್ಥಾನದ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಗಣ್ಯರಿಂದ ಧ್ವಜಾರೋಹಣ ಗೈದು, ನಂತರ ಮಕ್ಕಳಿಂದ ದೇಶ, ರಾಷ್ಟ್ರಗೀತೆ ದೇಶಭಕ್ತಿಗೀತೆ ನಡೆದವು. ಇದೇ ವೇಳೆ ಮಹಾಲಕ್ಷೀ ಆನೆ ರಾಷ್ಟ್ರ ಧ್ವಜವನ್ನು ಹಿಡಿದು, ಭಾಗವಹಿಸಿದ್ದ ಮಾತ್ರವಲ್ಲದೆ, ಧ್ವಜ ವಂದನೆಗೈದಿರುವುದು ವಿಶೇಷವಾಗಿತ್ತು. ನಿರಂತರ ಒಂದಲ್ಲ ಒಂದು ಕಸರತ್ತು ಮಾಡುತ್ತಿರುವ ಆನೆ ಇದೀಗ ಎಲ್ಲೆಡೆ ಪ್ರಸಿದ್ದಿ ಪಡೆಯುತ್ತಿದೆ.