ಮಂಗಳೂರು: ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಸಿರಿ & ಮ್ಯಾಟ್ರಿಕ್ಸ್ ತಂಡಗಳು ಸ್ವಚ್ಛತೆಯನ್ನು ಉತೇಜಿಸುವ ಉದ್ದೇಶದೊಂದಿಗೆ ಸ್ವಚ್ಛ ಸುಲ್ತಾನ್ ಬತ್ತೇರಿ ಎಂಬ ಸ್ವಚ್ಛತಾ ಕಾರ್ಯಕ್ರಮವನ್ನು ಮಾರ್ಚ್ 29ರಂದು ಬೆಳಗ್ಗೆ 8ರಿಂದ 10ರವರೆಗೆ ಆಯೋಜಿಸಿದೆ.
ಹಸಿರು ದಳ ಸಂಯೋಜಕರಾದ ನಾಗರಾಜ್ ಬಜಾಲ್ ಈ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸುತ್ತಿದ್ದು, ಸ್ವಚ್ಛತೆಯ ಮಹತ್ವದ ಕುರಿತು ಮಾತನಾಡಲಿದ್ದಾರೆ. ನಂತರ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯವ ಆರಂಭವಾಗಲಿದೆ. ಸುರಕ್ಷತೆಯ ದೃಷ್ಟಿಯಿಂದ ಸ್ವಯಂಸೇವಕರಿಗೆ ಕೈ ಗವಸುಗಳನ್ನು ವಿತರಿಸಲಾಗುವುದು ಹಾಗು ಉಪಹಾರವನ್ನು ಒದಗಿಸಲಿದ್ದಾರೆ.
ಸಿರಿ & ಮ್ಯಾಟ್ರಿಕ್ಸ್ ತಂಡದಲ್ಲಿ ಅನುಷಾ, ಮೈತ್ರಿ, ಕ್ಷಿತಿ, ವಿನ್ಯಾ, ಪ್ರಜ್ಞಾ, ಸಾಯಿ ಕೃತಿಕ್, ಸಲ್ಮಾನ್, ರಾಧಾಕೃಷ್ಣ, ಅರುಣ್ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇರಲಿದ್ದಾರೆ.