ಸುರತ್ಕಲ್: ಸುರತ್ಕಲ್ ಚೊಕ್ಕಬೆಟ್ಟುವಿನಲ್ಲಿ ಮಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಇನಾಯತ್ ಅಲಿ ರೋಡ್ ಶೋ ನಡೆಸಿದರು. ಬಳಿಕ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾತನಾಡಿದರು. ನಂತರ ಸುರತ್ಕಲ್ನ ವಾರದ ತರಕಾರಿ ಮಾರುಕಟ್ಟೆಗೆ ಇಂದು ಭೇಟಿ ಕೊಟ್ಟು, ಅಲ್ಲಿನ ತರಕಾರಿ ಮಾರಾಟಗಾರರ ಸಮಸ್ಯೆ ಆಲಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಅದೇ ರೀತಿ ಮಂಗಳೂರು ಉತ್ತರ ಕ್ಷೇತ್ರದ ಅಶೋಕನಗರದಲ್ಲಿರುವ ಡೊಮಿನಿಕ್ ಚರ್ಚ್’ಗೆ ಭೇಟಿ ನೀಡಿ ಅಲ್ಲಿನ ಗುರುಗಳ ಆಶೀರ್ವಾದ ಪಡೆದು ಲೋಕ ಕಲ್ಯಾಣ ಕುರಿತು ಚರ್ಚೆ ನಡೆಸಿದರು.
ಮಂಗಳೂರು ಉತ್ತರ ಕ್ಷೇತ್ರದ ವಿವಿಧ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ, ಕಾಂಗ್ರೆಸ್’ಗೆ ಮತಯಾಚಿಸಿದರು. ಈ ವೇಳೆ ರಾಜರಾಜೇಶ್ವರಿ ದೇವಸ್ಥಾನ, ನೆಕ್ಕಿಲದ ಶ್ರೀ ನವದುರ್ಗಾಂಬಿಕಾ ದೇವಸ್ಥಾನ ಹಾಗೂ ಕೋಡಿಕಲ್’ನ ವೀರಾಂಜನೇಯ ವ್ಯಾಯಾಮ ಶಾಲೆಗೆ ಭೇಟಿ ನೀಡಿದರು.