News Karnataka Kannada
Tuesday, April 30 2024
ಮಂಗಳೂರು

ಸುಳ್ಯ: ಅರಂತೋಡು ಅರಮನೆಗಯದಲ್ಲಿ ಮತ ಬಹಿಷ್ಕಾರ ಬ್ಯಾನರ್, ಸೇತುವೆ ನಿರ್ಮಿಸಿಕೊಡಲು ಮನವಿ

Sullia: Aranthodu Palace boycott banner, request for construction of bridge
Photo Credit : News Kannada

ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಅರಮನೆಗಾಯ ಎಂಬಲ್ಲಿ 40 ವರ್ಷಗಳಿಂದ ಸೇತುವೆ ನಿರ್ಮಿಸಲು ಸಚಿವರಾದ ಎಸ್ ಅಂಗಾರವರಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರಮನೆ ಗಾಯದ 40 ದಲಿತ ಕುಟುಂಬದವರು ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ದಿನಾಂಕ ಮಾ.14 ರಂದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಇಲ್ಲಿ ಸುಮಾರು 40 ದಲಿತ ಕುಟುಂಬಗಳು ವಾಸವಾಗಿದ್ದಾರೆ, 40 ವರ್ಷಗಳಿಂದ ನಮಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಶಾಸಕರು ಮತ್ತು ಈಗಿನ ಸಚಿವರಾಗಿರುವ ಎಸ್ ಅಂಗಾರವರಿಗೆ ಮನವಿ ಪತ್ರ ಕೊಟ್ಟು ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ, ಇವರಿಗೆ ದಲಿತರ ಓಟು ಬೇಕು ದಲಿತರ ಮಕ್ಕಳು ಸೇರಿದಂತೆ ಇತರರು ಆ ತೂಗು ಸೇತುವೆ ಮೇಲೆ ಹೋಗುವ ಸಂದರ್ಭದಲ್ಲಿ ಸ್ವಲ್ಪ ಆಯ ತಪ್ಪಿದರೂ ನದಿಗೆ ಬೀಳುವ ಪರಿಸ್ಥಿತಿ ಇದ್ದರೂ ಇದುವರೆಗೂ ಶಾಸಕರು ಇಲ್ಲಿ ಬಂದು ನೋಡಿಲ್ಲ.

ಹಾಗಾಗಿ ಈ ಬಗ್ಗೆ ಯಾವುದಕ್ಕೂ ಕ್ಯಾರೆ ಎನ್ನದ ಶಾಸಕರು ಅರಮನೆಗಾಯದ ನಿವಾಸಿಗಳು ಶಾಸಕರಿಗೆ ಕರೆ ಮಾಡಿದಾಗ ಓಟು ಕಳೆದು ಸೇತುವೆ ನಿರ್ಮಿಸಿ ಕೊಡುತ್ತೇನೆ ಎಂದು ಹೇಳಿ, ಓಟು ಕಳೆದು ಗೆದ್ದ ನಂತರ ಕರೆ ಮಾಡಿದಾಗ ಶಾಸಕರು ಹೇಳುವುದು ನಿಮ್ಮ ಓಟು ನನಗೆ ಬೇಕಾಗಿಲ್ಲ ಎಂದು ಹೇಳುತ್ತಾರೆ.

ಒಬ್ಬ ಉನ್ನತ ಸ್ಥಾನದಲ್ಲಿದ್ದ ಶಾಸಕರು ಈ ರೀತಿಯ ಮಾತನ್ನು ಹೇಳುವುದು ಸರಿಯಲ್ಲ ಯಾವ ಶಾಸಕರು ಕೂಡ ಅವರ ಜೇಬಿನಿಂದ ಕೊಡುವಂತದ್ದಲ್ಲ ಜನರ ಟ್ಯಾಕ್ಸ್ ಹಣದಿಂದ ಅನುದಾನ ತರುವಂತದ್ದು. ಸುಳ್ಯ ತಾಲೂಕು ಮೀಸಲಾತಿ ಕ್ಷೇತ್ರ ಆದರೆ ಇಲ್ಲಿ ದಲಿತರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಮತ್ತು ಇಲ್ಲಿನ ನಿವಾಸಿಗಲು ಶಾಸಕರ ಜೊತೆ ಮಾತನಾಡಿದಾಗ ಆ ಸೇತುವೆಗೆ 60 ಲಕ್ಷ ಅನುದಾನ ಇಟ್ಟಿದ್ದೇನೆ, ನಾಳೆ ಜಲ್ಲಿ ಬರುತ್ತದೆ, ಸಿಮೆಂಟ್ ಬರುತ್ತದೆ.

ಕಬ್ಬಿನ ಬರುತ್ತದೆ ಎಂದು ಸುಳ್ಳು ಭರವಸೆಯನ್ನು ಕೊಟ್ಟ ಶಾಸಕರು ಒಬ್ಬ ದಲಿತ ಶಾಸಕರಾಗಿ ಉನ್ನತ ಸ್ಥಾನದಲ್ಲಿದ್ದು ಈ ರೀತಿಯ ಸುಳ್ಳು ಭರವಸೆಯನ್ನು ಕೊಡುವುದನ್ನು ನಿಲ್ಲಿಸಿ ಆದಷ್ಟು ಬೇಗ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶುರು ಮಾಡಿ ಇಲ್ಲದಿದ್ದರೆ ಇಲ್ಲಿಯ ದಲಿತ ನಿವಾಸಿಗಳು ಯಾವುದೇ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಅರಮನೆ ಗಾಯ ಸಾರ್ವಜನಿಕರು ನಿರ್ಧರಿಸಿದ್ದಾರೆ.

ಈಗಾಗಲೇ ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಕೂಡ ಅಳವಡಿಸಿದ್ದಾರೆ ಆದಕಾರಣ ಶಾಸಕರಾದ ಎಸ್ ಅಂಗಾರವರು ಆದಷ್ಟು ಬೇಗ ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು