ವಿಟ್ಲ: ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಯನ್ನು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಬಿಡುಗಡೆ ಮಾಡಿ ಆಶೀರ್ವದಿಸಿದರು.
ಈ ಸಂಧರ್ಭದಲ್ಲಿ ಸಾಹಿತ್ಯ ಮತ್ತು ಗಾಯನ ಮಾಡಿದ ಶ್ವೇತಾ ಪ್ರವೀಣ್ ಆಚಾರ್ಯ ಇವರಿಗೆ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ದಯಾನಂದ ಅಮೀನ್ ಬಾಯಾರು ದೇವಿಪ್ರಸಾದ್ ಕುಕ್ಕಾಜೆ ಸತ್ಯಪ್ರಸಾದ್ ಕುಕ್ಕಾಜೆ ಅಶ್ವಿನ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.
ಈ ಹಾಡಿಗೆ ಶ್ವೇತಾ ಪ್ರವೀಣ್ ಆಚಾರ್ಯ ಮೂಡಬಿದ್ರೆ ಗಾಯನ ಮತ್ತು ಸಾಹಿತ್ಯ ನೀಡಿದ್ದಾರೆ. ಪ್ರಚಾರ ಕಲೆ ಮತ್ತು ಸಂಕಲನ ಜಿತೇಶ್ ಸರಪಾಡಿ. ನ ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಮೂಡಿಬಂದಿದೆ.
ಈ ಹಾಡನ್ನು ದಯಾ ಕ್ರಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.