ಮಂಗಳೂರು: ಸೆ.28ರಂದು ಮಂಗಳೂರಿನ ಕದ್ರಿ ಜಿಮ್ಮಿಸ್ ಸೂಪರ್ ಮಾರ್ಕೆಟ್ ಬಳಿಯ ಸಿಟಿ ಗೇಟ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಸರ್ವಮೋದ ಎರಡನೇ ಮಳಿಗೆ ಶುಭಾರಂಭಗೊಂಡಿದೆ.
ಸರ್ವಮೋದದ ಮೊದಲನೇ ಮಳಿಗೆ ಫಾರಂ ಮಾಲ್ನಲ್ಲಿ ಇದ್ದು, ನಂತೂರಿನ ಸಿಟಿ ಗೇಟ್ ಕಾಂಪ್ಲೆಕ್ಸ್ ನಲ್ಲಿ ಸರ್ವಮೋದದ 2ನೇ ಮಳಿಗೆಯನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದೈಜಿವರ್ಲ್ಡ್ ನ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಮತ್ತು ನಿರೂಪಕಿ ಮತ್ತು ಸೆಲೆಬ್ರಿಟಿ ನಿರೂಪಕಿ ಸೌಜನ್ಯ ಹೆಗ್ಡೆ ಅವರು ಉದ್ಘಾಟಿಸಿದರು. ದೈಜಿವರ್ಲ್ಡ್ ನ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಅವರು ಪುರುಷರ ವಿಭಾಗದ ಕಸ್ಟಮೈಸ್ ಕಲೆಕ್ಷನ್ನ್ಸ್ ಗಳನ್ನು ಉದ್ಘಾಟಿಸಿ ಸಂಸ್ಥೆಯು ಮತ್ತಷ್ಟು ಉತ್ತುಂಗಕ್ಕೆ ಏರುವಂತೆ ಶುಭ ಹಾರೈಸಿದ್ದಾರೆ.
ಇನ್ನು ಸೌಜನ್ಯ ಹೆಗ್ಡೆ ಅವರು ಮಹಿಳಾ ವಿಭಾಗದ ಕಲೆಕ್ಷನ್ನ್ಸ್ ಗಳನ್ನ ಶುಭಾರಂಭಗೊಳಿಸಿ ಹಾರೈಸಿದ್ದಾರೆ. ಇನ್ನು ಈ ಮಳಿಗೆಯಲ್ಲಿ ನಿಮ್ಮ ಫ್ಯಾಷನ್ ಅನ್ನು ಮತ್ತಷ್ಟು ದ್ವಿಗುಣಗೊಳಿಸಲು ವಿಭಿನ್ನ ಶೈಲಿಯ ಉಡುಗಳ ಸಂಗ್ರಹವಿದೆ. ಡಿಸೈನರ್ ಸೀರೆಗಳು, ರೇಷ್ಮೆ ಸೀರೆಗಳು, ಕೈಯಿಂದ ಸಿದ್ದಗೊಂಡ ಸೀರೆಗಳ ಕಲೆಕ್ಷನ್ನ್ಸ್, ನಿಮ್ಮ ಲೈಪ್ ಸ್ಟೈಲ್ಗೆ ಒಪ್ಪುವಂತಹ ವಿನ್ಯಾಸಗಳು ಸಿಗಲಿದೆ.