ಮೂಡುಬಿದಿರೆ: ಮೂಡುಬಿದಿರೆಯಿಂದ ಕಾರ್ಕಳದತ್ತ ಸಾಗುವ ರಾಷ್ಟ್ರೀಯ ಹೆದ್ದಾರಿ 169ರ ಅಂಚಿನಲ್ಲಿ ಬೆಳುವಾಯಿ ಪೇಟೆಯಲ್ಲಿ ವಿದ್ಯುತ್ ಪರಿವರ್ತಕವೊಂದು ಮಂಗಳವಾರ ಅಪರಾಹ್ನ ಒಂದು ಗಂಟೆಯ ದ ವೇಳೆಗೆ ದಿಢೀರ್ ಕುಸಿದು ಬಿದ್ದು ಆತಂಕಕ್ಕೆ ಕಾರಣವಾಯಿತು.
ಬೆಳುವಾಯಿಯ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆಯ ಆವರಣದ ಬಳಿ ಸವರ್ೀಸ್ ರಸ್ತೆಯ ಪಕ್ಕದಲ್ಲೇ ಇದ್ದ ಈ ವಿದ್ಯುತ್ ಪರಿವರ್ತಕ ಕಂಬಗಳ ಸಹಿತ ಧರೆಗುರುಳಿದರೂ ಘಟನಾ ಸ್ಥಳದಲ್ಲಿ ಆ ಹೊತ್ತಿನಲ್ಲಿ ಯಾರೂ ಇರದ ಕಾರಣ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಈ ಭಾಗದಲ್ಲಿ ಹೈವೇ ವಿಸ್ತರಣೆ ಕಾರ್ಯ ನಡೆಯುತ್ತಿದ್ದು ಕೆಲವೇ ದಿನಗಳ ಹಿಂದೆ ರೋಡ್ ಮಾಜರ್ಿನ್ ಕಾರಣಕ್ಕೆ ಈ ವಿದ್ಯುತ್ ಪರಿವರ್ತಕವನ್ನು ಅವರ ಮುತುವಜರ್ಿಯಲ್ಲೇ ಈಗಿರುವ ಸ್ಥಳಕ್ಕೆ ಬದಲಾಯಿಸಲಾಗಿತ್ತು.
ಆದರೆ ತರಾತುರಿಯ ಈ ಕಾಮಗಾರಿಯಲ್ಲಿ ಕಂಬಗಳನ್ನು ಸರಿಯಾಗಿ ಆಳವಾದ ಗುಂಡಿಯಲ್ಲಿ ಭದ್ರಪಡಿಸದಿರುವುದು, ಕಳೆದ ಎರಡು ದಿನಗಳಿಂದ ಬೆಳುವಾಯಿ ಪರಿಸರದಲ್ಲಿ ಮಳೆ ಸುರಿದಿರುವುದರಿಂದ ಈ ವಿದ್ಯುತ್ ಪರಿವರ್ತಕದ ಬುಡ ಶಿಥಿಲವಾದಂತಾಗಿ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹೈವೇ ಕಾಮಗಾರಿಯವರು, ಮೆಸ್ಕಾಂನವರು ಆಗಮಿಸಿ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ವಿದ್ಯುತ್ ಪರಿವರ್ತಕ ಮತ್ತೆ ಅಳವಡಿಸುವ ಕೆಲಸ ಬಾಕಿಯಾಗಿದ್ದು ಬ್ಲೋಸಂ ಶಾಲೆ ಹಾಗೂ ಹತ್ತಿರದ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಶಾಲಾ ಸಂಚಾಲಕ ಸೈಮನ್ ಮಸ್ಕರೇನಸ್ ತಿಳಿಸಿದ್ದಾರೆ.
ಘಟನೆ ನಡೆದ ವೇಳೆ ಪಕ್ಕದಲ್ಲೇ ಎರಡು ಮನೆಗಳಿರುವುದು, ಸವರ್ೀಸ್ ರೋಡ್ ರಚನೆಯಾಗಿದ್ದರೂ ಇನ್ನೂ ಬಳಕೆಗೆ ತೆರೆದುಕೊಳ್ಳದಿರುವುದು., ಕಾಮರ್ಿಕರು ಈ ಭಾಗದಲ್ಲಿ ಇಲ್ಲದಿದ್ದ ಕಾರಣ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.
ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…
ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯ 85 ಫ್ಲೈಟ್ಗಳು ರದ್ದಾಗಿವೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ…
ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೆಟ್ಟು ಹೋದ ಕೋಳಿ ಮಾಂಸವನ್ನು ಶವರ್ಮಾ…
ಕುಡಿಯುವ ನೀರಿನ ಸಮಸ್ಯೆಯನ್ನು ತಪ್ಪಿಸಲು ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿದ ಪ್ರಾಚೀನ ಕೆರೆಗಳಿಗೆ ಹೊಸರೂಪ ನೀಡಲು ಇಲಾಖೆ ಮುಂದಾಗಿದ್ದು ಪುತ್ತೂರು ಸಹಾಯಕ…
ಚಿಕನ್ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…