News Karnataka Kannada
Sunday, April 28 2024
ಮಂಗಳೂರು

ಬಿಜೆಪಿ ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನತೆ: ಇನಾಯತ್ ಅಲಿ

People fed up with BJP's corrupt rule: Inayat Ali
Photo Credit : News Kannada

ಮಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಗ್ಯಾರಂಟಿ ನೋಂದಣಿ ಅಭಿಯಾನಕ್ಕೆ ಅಂಗವಾಗಿ ಮಂಗಳವಾರ ಮಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನಡೆಯಿತು.

ಈ ವೇಳೆ ಇನಾಯತ್ ಅಲಿ ಅವರು ಮಾತನಾಡಿ, ನಾವು ಎರಡು ದಿನಗಳಿಂದ ಪ್ರತಿ ಮನೆಗಳಿಗೆ ಭೇಟಿ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಮೇಲೆ ಜನರು ಬಾರಿ ನಿರೀಕ್ಷೆ ಇಟ್ಟಿದ್ದು, ಬಿಜೆಪಿ ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್ ಆರ್.ಕೆ, ರಾಜ್ ಕುಮಾರ್ ಶೆಟ್ಟಿ ವಾಮಂಜೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯು.ಪಿ.ಇಬ್ರಾಹಿಂ, ಮಲ್ಲೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುದೀರ್ ರಾವ್, ಗುರುಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುಫೀದ್ ಅಡ್ಯಾರ್, ಎಮ್.ಕೆ.ಯೂಸುಫ್, ಅಫ್ಸತ್ ಪೆರ್ಮಂಕಿ, ಅಬೂಸಲಿ ದೆಮ್ಮಲೆ, ಸುಹೈಲ್ ಕಂದಕ್, ಅಬ್ದುಲ್ಲಾ ಮಲ್ಲೂರು, ಹಸನ್ ಬಾವ, ನೌಫಲ್ ಉದ್ದಬೆಟ್ಟು, ಅಶ್ರಫ್ ಅಡ್ಯಾರ್, ವೇಣುಗೋಪಾಲ್ ಮಲ್ಲೂರು, ಬದ್ರಿಯಾ ನಗರ, ಇಕ್ಬಾಲ್ ಕಿನ್ನಿಕಟ್ಟ, ಜಬ್ಬಾರ್ ಮಲ್ಲೂರು, ಅಶ್ರಫ್ ಬದ್ರಿಯಾ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು