Categories: ಮಂಗಳೂರು

ಮಂಗಳೂರು: ಕರ್ಣಾಟಕ ಬ್ಯಾಂಕಿನ ಮೂಲಕ ಆನ್ಲೈನ್ ಕಸ್ಟಮ್ಸ್ ತೆರಿಗೆ ಪಾವತಿ

ಮಂಗಳೂರು: ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕಿನ ಮೂಲಕ ಇಂದಿನಿಂದ ಭಾರತೀಯ ಪರೋಕ್ಷ ತೆರಿಗೆ ಪಾವತಿ ವ್ಯವಸ್ಥೆಯ ಕೇಂದ್ರ ಕಚೇರಿ ರಾಷ್ಟ್ರೀಯ ಜಾಲತಾಣವಾದ (ಪೋರ್ಟಲ್) ಇಂಡಿಯನ್ ಕಸ್ಟಮ್ಸ್ ಇಲೆಕ್ಟಾನಿಕ್  ಗೇಟ್ ವೇ (ICEGATE) ಮುಖಾಂತರ ಆನ್ಲೈನ್ ನಲ್ಲಿ ಕಸ್ಟಮ್ಸ್ ತೆರಿಗೆ ಪಾವತಿಸಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀ
ಮಹಾಬಲೇಶ್ವರ ಎಂ ಎಸ್ ಅವರು ಈ ಸೌಲಭ್ಯದ ಮುಖಾಂತರ ನಮ್ಮ ಬ್ಯಾಂಕಿನ ವೈಯಕ್ತಿಕ ಹಾಗೂ ವಾಣಿಜ್ಯ ಗ್ರಾಹಕರಿಗೆ
ಕಸ್ಟಮ್ಸ್ ತೆರಿಗೆಯನ್ನು ಅವರಿಗೆ ಅನುಕೂಲವಾಗುವಂತೆ ಕಸ್ಟಮ್ಸ್ ತೆರಿಗೆ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿಯೇ
ಕರ್ಣಾಟಕ ಬ್ಯಾಂಕಿನ ಮೂಲಕ ಪಾವತಿ ಮಾಡಬಹುದಾಗಿದ್ದು, ಇದು ಅವರ ವ್ಯವಹಾರಗಳಿಗೆ ಪೂರಕ ವಾತಾವರಣವನ್ನು
ಒದಗಿಸಲಿದೆ. ಇದರಿಂದಾಗಿ ಬ್ಯಾಂಕಿನ ವಿದೇಶೀ ವ್ಯವಹಾರಗಳ ಮೇಲೆ ಧನಾತ್ಮಕ ಪರಿಣಾಮ ಉಂಟಾಗಲಿದ್ದು, ಬ್ಯಾಂಕಿನ
ಕಾಸಾ (CASA)) ಠೇವಣಿಗಳು ಇನ್ನಷ್ಟು ವೃದ್ಧಿಯಾಗಲಿವೆ ಎನ್ನುವ ವಿಶ್ವಾಸವಿದೆ. ಬ್ಯಾಂಕಿನ ಡಿಜಿಟಲ್ ಪರಿವರ್ತನಾ
ಪ್ರಕ್ರಿಯೆಯಾದ ‘ಕೆಬಿಎಲ್ ನೆಕ್ಸ್’ ಮೂಲಕ ನಮ್ಮ ಗ್ರಾಹಕರಿಗೆ ದೊರೆತ ಅನೇಕ ಡಿಜಿಟಲ್ ಸೌಲಭ್ಯಗಳಲ್ಲಿ ICEGATE ಮೂಲಕ ಕಸ್ಟಮ್ಸ್ ತೆರಿಗೆ ಪಾವತಿ ವಿಧಾನವೂ ಒಂದಾಗಿದೆ ಬ್ಯಾಂಕಿನ ಗ್ರಾಹಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸುತ್ತಿದ್ದೇನೆ ಎಂದು ನುಡಿದರು.

 

Sneha Gowda

Recent Posts

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

10 mins ago

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

29 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

55 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

1 hour ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

1 hour ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

1 hour ago