ನ್ಯೂಸ್ ಕರ್ನಾಟಕ ವತಿಯಿಂದ ‘ಆಷಾಡ ಮಿನದನ’ ಎಂಬ ಆಟಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಕಾರ್ತೆಲ್ ತಿಂಗಳು ಕಳೆದು ನಾವು ಕಾಲಿಡುವುದೇ ಆಟಿ ತಿಂಗಳಿಗೆ. ಸೌರಮಾನ ಪದ್ಧತಿಯ ನಾಲ್ಕನೇ ಮಾಸ ಆಟಿ ತಿಂಗಳು. ಹೆಚ್ಚಿನ ರೋಗರುಜಿನಗಳು ಬಾಧಿಸುವ ತಿಂಗಳು ಇದೆಂದು ತುಳುಜನರ ನಂಬಿಕೆ. ಈ ತಿಂಗಳಲ್ಲಿ ಎಲ್ಲೆಲ್ಲೂ ಬಡತನ. ಯಾವುದೇ ಬೆಳೆಗಳನ್ನು ಬೆಳೆಯಲಾಗದ ಮಾಸವಿದು.
ಈ ಸಂದರ್ಭದಲ್ಲಿ ಮಾನವ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧ ಮನೆ ಮಾಡುತ್ತದೆ. ಎಲ್ಲೆಡೆಯಲ್ಲಿ ಪಸರಿಸಿರುವ ಕೆಸುವಿನ ಎಲೆಯನ್ನು ಸುರುಳಿಯಾಗಿ ಮಡಿಸಿ ಗಂಟು ಹಾಕಿ ಮಾಡುವ ಪದಾರ್ಥ ತೇಟ್ಲ, ಪತ್ರೊಡೆ. ನುಗ್ಗೆ ಸೊಪ್ಪಿನ ಜೊತೆ ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಹಲಸಿನ ಬೀಜ ಸೇರಿಸಿ ಪಲ್ಯ. ತಿಮರೆ ಚಟ್ನಿ, ತಜಂಕ್ ಪಲ್ಯ, ಕಿರಾತ ಕಡ್ಡಿ ಕಷಾಯ, ಮಾವಿನಕಾಯಿ ಗೊಜ್ಜು ಪಲ್ಯ, ಹಲಸಿನ ಸೊಳೆ (ಉಪ್ಪಡ್ ಪಚ್ಚಿಲ್), ಉಪ್ಪಿನಕಾಯಿ, ಕಣಿಲೆ (ಎಳೆ ಬಿದಿರು)ಪಲ್ಯ. ವಿವಿಧ ಬಗೆಯ ಹಪ್ಪಳಗಳು, ಹುರಿದ ಹುಣಸೆ ಬೀಜ, ಮೆತ್ತೆಗಂಜಿ, ಒಲ್ಲೆಕೊಡಿ ಕಷಾಯಗಳು ತುಳುಜನರ ಹಸಿವಿಗಾಗುವ ಅಮೃತಗಳು. ಇದು ಹಿಂದಿನ ಕಾಲದಲ್ಲಿ ಇದ್ದ ಜೀವನ ಪದ್ದತಿ.
ಆದ್ರೆ ಈ ಎಲ್ಲದರ ಹೊರತಾಗಿ ಇಂದಿನ ಜೀವನ ಪದ್ದತಿಯಲ್ಲಿ ಈ ಬಾರಿ ವಿಶೇಷ ರೀತಿಯಲ್ಲಿ ಆಟಿಯನ್ನು ನೀವು ಹೇಗೆ ಆಚರಿಸ್ತೀರಿ ಅನ್ನೋದನ್ನು ನಮಗೆ ತಿಳಿಸಿ, ನಿಮ್ಮ ಕ್ರಿಯಾತ್ಮಕ ಚಟುವಟಿಕೆಗೆ ವೇದಿಕೆ ಕಲ್ಪಿಸಲಿದೆ ‘ ನ್ಯೂಸ್ ಕರ್ನಾಟಕ’. ನಮ್ಮ ನಿಮ್ಮ ಜಂಟಿ ಆಶ್ರಯದಲ್ಲಿ ಈ ಬಾರಿ ಆಟಿ ಆಚರಣೆಯಾಗಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ + 91 76762 18092.
ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ…
ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್ಫ್ಲಿಕ್ಸ್ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…
ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…
ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…
ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…
ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಇಂದು ಸಂಭವಿಸಿದೆ