News Karnataka Kannada
Monday, April 29 2024
ಮಂಗಳೂರು

ನೈತಿಕ ಪೊಲೀಸ್‌ ಗಿರಿ ಪ್ರಕರಣ ಯುವತಿಯರ ಮೇಲೂ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ

Moral policing case: Police requested to take action against young girls
Photo Credit : News Kannada

ಮಂಗಳೂರು: ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಅಮಾಯಕರ ಬಂಧನ ನಡೆಸಲಾಗಿದೆ, ಅಶ್ಲೀಲವಾಗಿ ವರ್ತಿಸಿದ ಯುವತಿಯರನ್ನು ಹಾಗೂ ಯುವಕರ ಮೇಲೆ ಕ್ರಮ ಕೈಗೊಂಡಿಲ್ಲ. ಯುವತಿಯರ ಸಂಬಂಧಿಕರು ಹಾಗೂ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು. ಮೂರು ದಿನಗಳ ಒಳಗೆ ಪೊಲೀಸರು ಅವರನ್ನು ಕರೆತಂದು ವಿಚಾರಣೆ ನಡೆಸದೇ ಇದ್ದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಪೊಲೀಸ್ ಠಾಣೆ ಎದುರು ಮಹಿಳೆಯರು ಸೇರಿಕೊಂಡು ಪ್ರತಿಭಟಿಸಲಿದ್ದೇವೆ ಎಂದು ಬಿಜೆಪಿ ಮುಖಂಡೆ ಧನಲಕ್ಷ್ಮೀ ಗಟ್ಟಿ ಹೇಳಿದ್ದಾರೆ.

ಹಿಂದು ಯುವತಿಯರ ಪೋಷಕರನ್ನ ಠಾಣೆಗೆ ಕರೆಸಿ‌ ಪ್ರಕರಣದ ಅಸಲಿಯತ್ತನ್ನ‌ ಅವರಿಗೆ ತಿಳಿಯ ಪಡಿಸಬೇಕೆಂದು ಉಳ್ಳಾಲ ಮಹಿಳಾ ರಕ್ಷಣಾ ವೇದಿಕೆ ವತಿಯಿಂದ ಇಂದು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಧನಲಕ್ಷ್ಮಿ ಗಟ್ಟಿ ಅವರು‌ ನೈತಿಕ‌ ಪೊಲೀಸ್ ಗಿರಿ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರವಾಗಿ ಏಳು ಜನ‌ ಹಿಂದೂ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಸೋಮೇಶ್ವರ ಬೀಚಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದವರೆಲ್ಲರೂ ವಿದ್ಯಾರ್ಥಿಗಳೆಂದೇ ಬಿಂಬಿಸಲಾಗಿತ್ತು. ಅಸಲಿಗೆ ಅಂದು ಮಂಗಳೂರಿನ‌ ಪ್ಯಾರಾ ಮೆಡಿಕಲ್ ಕಾಲೇಜಿನ‌ ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಬಂದಿದ್ದ ಮುಸ್ಲಿಂ‌ ಯುವಕರು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. ಹಿಂದೂ ಸಂಘಟನೆ‌ ಕಾರ್ಯ‌ಕರ್ತರಿಂದ‌ ಹಲ್ಲೆಗೊಳಗಾದ‌ ಕೇರಳದ ಚೆರ್ಕಳದ ಜಾಫರ್ ಶರೀಫ್ ಮೀಶೋ ಆನ್ ಲೈನ್ ಕಂಪನಿಯ ಡೆಲಿವರಿ ಬಾಯ್ ಆಗಿದ್ದರೆ, ಮಂಜೇಶ್ವರ ಮೂಲದ ಮಹಮ್ಮದ್ ಮುಜೀಬ್ ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸಕ್ಕಿದ್ದು, ಆಶಿಕ್ ಜವಳಿ ಶಾಪಲ್ಲಿ ಕೆಲಸ ಮಾಡುತ್ತಿದ್ದಾನೆ.

ಇವರಲ್ಲಿ ಓರ್ವನಿಗೆ ಮಂಗಳೂರಿನ‌ ಪ್ಯಾರಾ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಪ್ರೇಯಸಿಯಾಗಿದ್ದಳು. ಲವ್ ಜಿಹಾದ್ ನ ಅಮಲೇರಿಸಿದ್ದ ಈ ಕಿರಾತಕ ಪ್ರೇಯಸಿಯಲ್ಲಿ ಹೇಳಿ ಆಕೆಯ ಇಬ್ಬರು ಸ್ನೇಹಿತೆಯರನ್ನ ತನ್ನ ಇಬ್ಬರು ಸ್ನೇಹಿತರಿಗೆ ಪರಿಚಯಿಸಿ ಜತೆಯಾಗಿ ಸೋಮೇಶ್ವರ ಬೀಚ್ಗೆ ಬಂದು ಸಾರ್ವಜನಿಕರ ಎದುರೇ ಅಶ್ಲೀಲವಾಗಿ ವರ್ತಿಸಿ ಮೋಜು ಮಾಡಿದ್ದಾರೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯರೊಂದಿಗೆ‌ ಸಾರ್ವಜನಿಕವಾಗಿ ಮೋಜು ಮಾಡುವಾಗ ಕಣ್ಣಾರೆ ಕಂಡ‌‌ ಹಿಂದೂ ಯುವಕರು ಸಹಿಸ ಬೇಕಿತ್ತೇ ಎಂದು ಧನಲಕ್ಷ್ಮಿ‌ ಪ್ರಶ್ನಿಸಿದ್ದಾರೆ.

ಹಲ್ಲೆಗೊಳಗಾದ ಮುಸ್ಲಿಂ‌ ಯುವಕರು‌ ಅಮಾಯಕರಂತೆ ನಟಿಸಿ ಆಸ್ಪತ್ರೆ ಸೇರಿದ್ದು, ಆಸ್ಪತ್ರೆಯಿಂದ ಹೊರ ಹೋಗಿ ಮತ್ತೆ ಲವ್ ಜಿಹಾದ್ ಚಟುವಟಿಕೆಯಲ್ಲಿ ಸಕ್ರಿಯರಾಗುವುದು ಗ್ಯಾರಂಟಿ. ಹಾಗಾಗಿ ಅವರ ಜತೆಯಲ್ಲಿದ್ದ ಹಿಂದೂ ಯುವತಿಯರ ಪೋಷಕರನ್ನ ಎಚ್ಚರಿಸುವುದು ಪೊಲೀಸರ ಕರ್ತವ್ಯ. ನಮ್ಮ ಬೇಡಿಕೆ ಈಡೇರದಿದ್ದರೆ ಯುವತಿಯರು ವ್ಯಾಸಂಗ ಮಾಡುವ ಕಾಲೇಜಿನ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು