ಮಂಗಳೂರು: ಬಿಜೆಪಿ ರಾಜ್ಯಧ್ಯಾಕ್ಷ ಸ್ಥಾನದ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಮೈಸೂರಲ್ಲಿ ಸ್ಪಷ್ಟನೆ ನೀಡಿದ್ದು ರಾಜ್ಯಧ್ಯಾಕ್ಷ ಸ್ಥಾನ ನನಗೆ ಸಿಗಲ್ಲ ಎಂದಿದ್ದಾರೆ.
ʼನಾನು ಮಂತ್ರಿಯಾಗಿ ಇದ್ದೇನೆ ರಾಜ್ಯಧ್ಯಾಕ್ಷ ಸ್ಥಾನ ಕೊಡುವ ಪ್ರಶ್ನೆ ಇಲ್ಲ. ರಾಜ್ಯಧ್ಯಕ್ಷ ಸ್ಥಾನದ ಬಗ್ಗೆ ಕೇವಲ ಊಹಾ-ಪೋಹ. ಆ ರೀತಿಯ ಯಾವುದೇ ನಿರ್ಧಾರ ಇಲ್ಲ. ನಾನು ಕೇಂದ್ರದಲ್ಲಿ ಮಂತ್ರಿ ಇರೋದ್ರಿಂದ ನಾನು ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಚರ್ಚೆ ಇಲ್ಲ ಎಂದರು.
ಈ ವೇಳೆಯೇ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿದರು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶೋಭಾಗೆ ಅಮಿತ್ ಶಾ ಶುಭಾಶಯ ಕೋರಿದರು. ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಚರ್ಚೆಯಲ್ಲಿರುವಾಗಲೇ ಅಮಿತ್ ಶಾ ಕರೆ ಮಾಡಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇನ್ನು ಇಂದು ತಮ್ಮ ಹುಟ್ಟುಹಬ್ಬವನ್ನು ಶೋಭಾ ಅವರು ಮಾವುತರು, ಕಾವಾಡಿಗರ ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಆಚರಿಸಿಕೊಂಡರು.