ಮಂಗಳೂರು: ಶತಶತಮಾನಗಳಿಂದ ಕರಾವಳಿ ಕರ್ನಾಟಕದ ಮೂಲನಿವಾಸಿಗಳಾಗಿ ಇಲ್ಲಿಯ ನೆಲ,ಜಲ ಮತ್ತು ಅರಣ್ಯ ಸಂಪತ್ತಿನ ಒಡೆಯರಾದ ಕೊರಗ ಸಮುದಾಯವನ್ನು ಮೂಲೆಗುಂಪು ಮಾಡಿ, ಶೊಷಣೆಗೆ ಗುರಿ ಮಾಡಿ, ಅಮಾನವೀಯವಾಗಿ ನಡೆಸಿಕೊಂಡ ಪ್ರಭುತ್ವ ಮತ್ತು ಜನತೆ ಚಾರಿತ್ರಿಕವಾಗಿ ಅನ್ಯಾಯವೆಸಗಿದೆ. ವಿಚಿತ್ರವೆಂದರೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ,ಸಂವಿಧಾನಿಕ ಹಕ್ಕುಗಳು ಇದ್ದರೂ ಇಂದೂ ಕೂಡಾ ಇದೇ ಮನಸ್ಥಿತಿ ಮುಂದುವರಿಯುತ್ತಿರುವುದು ದುಃಖದ ಸಂಗತಿ, ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಟೀಕಿಸಿದರು.
ಅವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯ ಮಂಗಳ ಜ್ಯೋತಿ ಘಟಕದ ನೇತೃತ್ವದಲ್ಲಿ ನಡೆದ ಒಂದು ದಿನದ ಪಾದಯಾತ್ರೆಯ ಸಮಾರೋಪ ಭಾಷಣ ಮಾಡುತ್ತಾ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಸರಕಾರ ಆಗಾಗ ಕೇವಲ ಅಗ್ಗದ ಪ್ರಚಾರಕ್ಕಾಗಿ ಕೊರಗ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ವಿನಃ ನಿಜವಾದ ಇಚ್ಚಾ ಶಕ್ತಿ ಇಲ್ಲ ಎಂದು ಹೇಳಿದರು,.ನಿವೇಶನ ರಹಿತ 33 ಕೊರಗ ಕುಟುಂಬಗಳಿಗೆ ಐದು ವರ್ಷ ಕಳೆದರೂ ನಿವೇಶನ ಹಸ್ತಾಂತರವಾಗಳೀ ದಾಖಲೆಗಳಾಗಲೀ ನೀಡದಿರುವುದರ ಹಿಂದೆ ಈ ದೃಷ್ಟಿಕೋನವೇ ಅಡಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕೊರಗ ಸಮುದಾಯದ ಮುಂದಾಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀಧರ್ ನಾಡಾ ರವರು ಮಾತಾನಾಡುತ, ಆದಿವಾಸಿ ಕೊರಗ ಸಮೂದಾಯದ ಭೂಮಿಯ ಪ್ರಶ್ನೆ ಮೂಲಭೂತ ಪ್ರಶ್ನೆಯಾಗಿದ್ದು ಕೇವಲ ಎರಡೂವರೆ ಸೆಂಟ್ಸ್ ನಿವೇಶನ ನೀಡಲು ಐದು ವರ್ಷಗಳ ಕಾಲ ಸತಾಯಿಸಿದ ನಗರ ಪಾಲಿಕೆ ಜನ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.ಉಭಯ ಜಿಲ್ಲೆಗಳ ಆದಿವಾಸಿ ಹಕ್ಕುಗಳ ಸಮಿತಿಯು ಮಹಮ್ಮದ್ ಪೀರ್ ವರದಿಯ ಪ್ರಕಾರ ಎರಡೂವರೆ ಎಕರೆ ಕೃಷಿ ಭೂಮಿ ಮಂಜೂರಾತಿಗಾಗಿ ಜಂಟಿ ಹೋರಾಟ ರೂಪಿಸಲಿದೆ ಎಂದು ಹೇಳಿದರು.
ದ.ಕ.ಜಿಲ್ಲಾ,ಪೆನ್ಸನ್ ದಾರರ ಸಂಘ ಇದರ ಜಿಲ್ಲಾ ಪ್ರಧನ ಕಾರ್ಯದರ್ಶಿ ಸುಕುಮಾರ್ ತೊಕ್ಕೋಟ್ಟು ರವರು ಮಾತನಾಡುತ್ತಾ ಭುಮಿಯ ಮೂಲ ಹಕ್ಕುದಾರರೇ ಭೂಮಿಗಾಗಿ ಹೋರಾಟ ಮಾಟಬೇಕಾದ ದುಸ್ಥಿತಿ ಬಂದಿರುವುದು ನಾಚಿಕೆಗೇಡು ಎಂದು ಹೇಳಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ,ಕೃಷ್ಣಪ್ಪ ಕೊಂಚಾಡಿಯವರು ಮಾತನಾಡುತಾ, ಮಂಗಳೂರು ಮಹಾನಗರ ಪಾಲಿಕೆಯು ನಿವೇಶನ ಹಂಚಿಕೆ, ನೇಮಕಾತಿ ಮತ್ತು ವಿವಿಧ ಯೋಜನೆಗಳಲ್ಲಿ ನಿರಂತರವಾಗಿ ಕೊರಗ ಸಮುದಾಯಕ್ಕೆ ಅನ್ಯಾಯವೆಸಗಿದೆ. ಪ್ರಸ್ತುತ 33 ಕೊರಗ ಕುಟುಂಬಗಳ ಮನೆ ವಾಸ್ತವಿಕವಾಗಿ ಹಸ್ತಾಂತರ ಆಗುವವರೆಗೆ ನಿರಂತರ ಹೋರಾಟ ನಡೆಸಲಾಗುವುದೆಂದು ಘೋಷಿಸಿದರು.
ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಮುಂದಾಳು ಹಾಗೂ ಕಾನಾನು ಸಲಹೆಗಾರರಾದ ಮನೋಜ್ ವಾಮಂಜೂರುರವರು ಬಹಿರಂಗ ಸಭೆಯಲ್ಲು ಭಷಣ ಮಾಡುತ್ತಾ ಕೊರಗ ಸಮುದಾಯದ ನ್ಯಾಯೀಚಿತ ಹೋರಾಟಕ್ಕೆ ಕಾನೂನಿನಬಲವಾದ ಬೆಂಬಲವಿದೆ ಎಂದು ಹೇಳಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಸಂಘಟನೆಯ ಜಿಲ್ಲಾ ಮಾರ್ಗದರ್ಶಕರಾದ ಯೋಗಿಶ್ ಜಪ್ಪಿನಮೊಗರು ಮಾಡಿದರು. ಪಾದಯಾತ್ರೆಯ ನಾಯಕ್ವವನ್ನು ಅಧ್ಯಕ್ಷರಾದ ಕರಿಯ ಕೆ, ಶೇಖರ್, ಪುನೀತ್, ಗಣೇಶ್ , ವಿನೋದ್ ,ಕೃಷ್ಣಪ್ಪ, ವಿಗ್ನೆಶ್, ವಿಕ್ಯಾತ್, ಮಂಜುಳಾ ಶಶಿಕಲಾ, ಯಶೋಧ. ಪೂರ್ಣಿಮಾ ತುಳಸಿ, ಮೊದಲಾದವರು ವಹಿಸಿದ್ದರು. ಕೊನೆಯಲ್ಲಿ ಸಹಸಂಚಾಲಕಾದ ರವೀಂದ್ರ ಮಂಗಳಜ್ಯೋತಿ ಇವರು ವಂದಿಸಿದರು. ಕೊನೆಯಲ್ಲಿ ಮೇಯರ್ ಮತ್ತು ಕಮೀಷರ್ರವರಿಗೆ ಸಾಮೂಹಿಕ ಮನವಿ ಅರ್ಪಿಸಲಾಯಿತು.
ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಧರ್ಮ ದಂಗಲ್ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…
ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…
ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.
ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…
ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.