Categories: ಮಂಗಳೂರು

ಮಂಗಳೂರು: ಕುವೈತ್ ನೇರ ವಿಮಾನಗಳ ಸಂಖ್ಯೆ ಇಳಿಕೆ, ಸಾವಿರಾರು ಪ್ರಯಾಣಿಕರಿಗೆ ಫಜೀತಿ

ಮಂಗಳೂರು: ಮಂಗಳೂರು ಹಾಗೂ ಕುವೈತ್ ನಡುವೆ ಇದ್ದ ನೇರ ಪ್ರಯಾಣದ ವಿಮಾನಗಳ ಸಂಖ್ಯೆಯನ್ನು ಇಳಿಸಲಾಗಿದೆ. ವಾರದಲ್ಲಿ ಸಂಚರಿಸುತ್ತಿದ್ದ ಮೂರು ವಿಮಾನಗಳನ್ನು ಈಗ ಒಂದಕ್ಕೆ ಇಳಿಸಲಾಗಿದೆ. ಇದರಿಂದಾಗಿ, ಅನೇಕ ಪ್ರಯಾಣಿಕರಿಗೆ ತೊಂದರೆಯಾಗಿದೆ.

ವಾರಕ್ಕೆ ಸುಮಾರು 30 ಸಾವಿರ ಜನರು ಈ ಎರಡೂ ನಗರಗಳ ನಡುವೆ ಸಂಚರಿಸುತ್ತಿದ್ದರು. ಈಗ, ಅನೇಕರು ಮಂಗಳೂರಿನಿಂದ ಕೇರಳದ ಕಣ್ಣೂರು, ಗೋವಾದ ಪಣಜಿ ಅಥವಾ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಕುವೈತ್ ವಿಮಾನಗಳನ್ನು ಏರಿ ಪ್ರಯಾಣಿಸಬೇಕಿದೆ. ಅಲ್ಲಿಂದ ಬರುವವರಿಗೂ ಅದೇ ಸಮಸ್ಯೆ ಎದುರಾಗಿದೆ.

ವಿಮಾನಗಳ ಸಂಖ್ಯೆಯನ್ನು ಇಳಿಸಿರುವ ಬಗ್ಗೆ ಯಾವುದೇ ಕಾರಣಗಳನ್ನು ಕೇಂದ್ರ ವಿಮಾನಯಾನ ಸಚಿವಾಲಯವಾಗಲೀ, ನಾಗರಿಕ ವಿಮಾನ ಸೇವೆಗಳ ಮಹಾ ನಿರ್ದೇಶಕರ ಕಚೇರಿಯಾಗಲೀ (ಡಿಜಿಸಿಎ) ಯಾವುದೇ ಕಾರಣವನ್ನು ಕೊಟ್ಟಿಲ್ಲ. ಆದರೆ, ಈ ಕ್ರಮದಿಂದಾಗಿ ಹಲವಾರು ಪ್ರಯಾಣಿಕರಿಗೆ ಅಧರಲ್ಲೂ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ಕುವೈತ್ ನಲ್ಲಿ ಮಂಗಳೂರಿನವರು ಹಾಗೂ ದಕ್ಷಿಣ ಕನ್ನಡದ ಇತರ ಭಾಗದವರು ಸಾವಿರಾರು ಮಂದಿ ಇದ್ದಾರೆ. ಅಲ್ಲದೆ, ಮಂಗಳೂರು, ಉಡುಪಿ ಜಿಲ್ಲೆಗಳ ಹಾಗೂ ಸುತ್ತಮುತ್ತಲಿನ ಪ್ರಾಂತ್ಯಗಳ ಮೂಲವುಳ್ಳ ಅನೇಕ ಅನಿವಾಸಿ ಭಾರತೀಯರೂ ಕುವೈತ್ ನಲ್ಲಿ ತುಂಬಾ ಮಂದಿಯಿದ್ದಾರೆ.

ಇವರು ಹಾಗೂ ಇವರ ಕುಟುಂಬದ ಕುಟುಂಬದ ಸದಸ್ಯರು ಮಂಗಳೂರಿನಿಂದ ಕುವೈತ್ ಗೆ ನೇರವಾಗಿ ಸಂಚಾರ ಮಾಡುತ್ತಿದ್ದರು. ಇದಲ್ಲದೆ, ಕೇರಳದ ಕಾಸರಗೋಡು, ಕರ್ನಾಟಕದ ಕೊಡಗು, ಹಾಸನ ಹಾಗೂ ಇನ್ನೂ ಆಸುಪಾಸು ಜಿಲ್ಲೆಗಳ ಜನರು ಕುವೈತ್ ಗೆ ಹೋಗಬೇಕೆಂದರೆ ಮಂಗಳೂರಿನ ಮೂಲಕವೇ ಹೋಗಿ ತಲುಪುವುದು ಸುಲಭವಾಗಿದೆ.

ಡಿಜಿಸಿಎ ಲೆಕ್ಕಾಚಾರದ ಪ್ರಕಾರ, ವರ್ಷಕ್ಕೆ ಏನಿಲ್ಲವೆಂದರೂ ಸುಮಾರು 30 ಸಾವಿರ ಜನರು ಮಂಗಳೂರು- ಕುವೈತ್ ನಡುವೆ ನೇರ ಪ್ರಯಾಣ ಮಾಡುತ್ತಾರೆ. ಒಂದು ಲೆಕ್ಕಾಚಾರದ ಪ್ರಕಾರ, ಕುವೈತ್ ನಲ್ಲಿ ಕಾರ್ಮಿಕರ ಮಟ್ಟದಿಂದ ಹಿಡಿದು ದೊಡ್ಡ ಕಚೇರಿಗಳಲ್ಲಿ ಉನ್ನತ ಹುದ್ದೆಗಳಲ್ಲಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ, ಇವರ ಸಂಖ್ಯೆ 50 ಸಾವಿರದಷ್ಟಿದೆ ಎಂದು ಹೇಳಲಾಗಿದೆ.

ಈಗ ಮಂಗಳೂರು – ಕುವೈತ್ ನಡುವಿನ ನೇರ ವಿಮಾನ ಸೌಕರ್ಯದಲ್ಲಿ ಇಳಿಕೆಯಾಗಿರುವುದರಿಂದ ಮಂಗಳೂರಿನಿಂದ ಕುವೈತ್ ಗೆ ಹೋಗುವ ಬಹುತೇಕ ಪ್ರಯಾಣಿಕರು ಕೇರಳದ ಕಣ್ಣೂರು, ಪಣಜಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸಿ ಅಲ್ಲಿಂದ ಕುವೈತ್ ಗೆ ಹೋಗುವ ವಿಮಾನಗಳಲ್ಲಿ ಪ್ರಯಾಣಿಸಬೇಕಿದೆ. ಕುವೈತ್ ನಿಂದ ಮಂಗಳೂರಿಗೆ ಬರುವವರಿಗೂ ಇದೇ ಫಜೀತಿಯಾಗಿದೆ.

ಇದು ಹೇಳಿದಷ್ಟು ಸುಲಭವಾದದ್ದಲ್ಲ. ಒಂದು ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನದಲ್ಲಿ ಹೋಗಿ ಕೂರುವುದೇ ದೊಡ್ಡ ತ್ರಾಸದಾಯಕ ಕೆಲಸ. ಇನ್ನು, ಮಂಗಳೂರಿನಿಂದ ಕಣ್ಣೂರಿಗೋ, ಪಣಜಿಗೋ ಅಥವಾ ಬೆಂಗಳೂರಿಗೋ ಹೋಗಿ ಅಲ್ಲಿ, ಒಂದು ವಿಮಾನವನ್ನಿಳಿದು ಲಗೇಜ್ ಮತ್ತಿತರ ತಮ್ಮ ಸಾಮಗ್ರಿಗಳನ್ನು ಎಳೆದಾಡಿಕೊಂಡು ಕುವೈತ್ ಕಡೆಗೆ ಹೋಗುವ ಬೇರೊಂದು ವಿಮಾನವಿರುವ ಟರ್ಮಿನಲ್ ಗೆ ಹೋಗಿ ಅಲ್ಲಿನ ಎಲ್ಲಾ ರೀತಿಯ ಔಪಚಾರಿಕ ಕ್ರಮಗಳನ್ನು ಮುಗಿಸಿಕೊಂಡು ಕುವೈತ್ ವಿಮಾನವನ್ನು ಏರಬೇಕಿರುತ್ತೆ.

ಇನ್ನು ಏಕಾಂಗಿಯಾಗಿ ಪ್ರಯಾಣಿಸುವವರಿಗೆ ಅಥವಾ ಮಕ್ಕಳನ್ನು- ಲಗೇಜ್ ಗಳನ್ನು ಹಿಡಿದುಕೊಂಡು ಹೋಗುವ ಮಹಿಳಾ ಪ್ರಯಾಣಿಕರಿಗೆ ಇದು ತುಂಬಾನೇ ಕಷ್ಟಕರವಾದ ಪ್ರಯಾಣ ಎನಿಸುತ್ತದೆ. ಇದನ್ನು ಮನಗಂಡು, ಕೇಂದ್ರ ಸರ್ಕಾರ ಮಂಗಳೂರು- ಕುವೈತ್ ನಡುವಿನ ನೇರ ವಿಮಾನಗಳನ್ನು ಮೊದಲಿನಿಂದ ಮೂರಕ್ಕೆ ಹೆಚ್ಚಿಸಬೇಕು ಎಂಬುದು ಅನೇಕ ಪ್ರಯಾಣಿಕರ ಆಗ್ರಹವಾಗಿದೆ.

Ashika S

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

2 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

2 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

3 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

4 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

4 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

5 hours ago