ಮಂಗಳೂರು: ಕಥೋಲಿಕ್‌ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವಕ್ಕೆ ಚಾಲನೆ

ಮಂಗಳೂರು, ಅ.6: ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ಮಂಗಳೂರು  ಕಥೋಲಿಕ್‌ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವದ ಆಚರಣೆಯ ಅಂಗವಾಗಿ ಧರ್ಮಪ್ರಾಂತ್ಯದ ಪ್ರಮುಖರ ಸಭೆಯು ಬಿಷಪ್ ಹೌಸ್‌ನಲ್ಲಿ ಜರುಗಿತು.

ಅಧ್ಯಕ್ಷ ಸ್ಥಾನ ವಹಿಸಿದ್ದ ಬಿಷಪ್‌ ಅತೀ ಪೂಜ್ಯ ಡಾ. ಪೀಟರ್‌ಪಾವ್ಲ್ ಸಲ್ಡಾನ್ಹಾರವರು ಸ್ಮರಣ ಸಂಚಿಕೆಯ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ‘ಈ ಪಾಲನಾ ಪರಿಷತ್ತು ಕಳೆದ 50 ವರ್ಷಗಳಲ್ಲಿ ಧರ್ಮಸಭೆಯಲ್ಲಿ ಮಹತ್ವದ ಸಾಧನೆ ಹಾಗೂ ಬದಲಾವಣೆ ತರಲು ಶ್ರಮಿಸಿದೆ. ಇದರಲ್ಲಿ ಹಲವು ಧಾರ್ಮಿಕ ಹಾಗೂ ಜನ ಸಾಮಾನ್ಯರ ತ್ಯಾಗ ಮಹತ್ವದಾಗಿದೆ. ನಮ್ಮ ಕಾರ್ಯಕ್ರಮವು ಮುಂದಿನ ಪೀಳಿಗೆಗೆ ದಿಕ್ಕು ತೋರುವ ಕಾರ್ಯಕ್ರಮವಾಗಲಿ’ ಎಂದು ಹಾರೈಸಿದರು.

ಕಾರ್ಯಕ್ರಮದ ಸಂಚಾಲಕರಾದ ಎಂ. ಪಿ. ನೊರೊನ್ಹಾರವರು ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪಾಲನಾ ಪರಿಷತ್ ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಪ್ರತಿ ಚರ್ಚ್ಗಳಲ್ಲಿ ಉತ್ಸವವನ್ನು ಆಚರಿಸಲು ಬಿಷಪ್‌ರವರು ನಿರ್ಧರಿಸಿರುತ್ತಾರೆ. ಇದಲ್ಲದೆ ಇದೇ 2022 ಡಿಸೆಂಬರ್ 10ರಂದು ಫಾದರ್ ಮುಲ್ಲರ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಧರ್ಮಪ್ರಾಂತ್ಯದ ಮಟ್ಟದ ಆಚರಣೆ ಜರಗಲಿದ್ದು ಹಲವಾರು ವಿಶೇಷ ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದ್ದು, ಧರ್ಮಪ್ರಾಂತ್ಯದ 2000 ಪ್ರತಿನಿಧಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸುವರ್ಣ ಮಹೋತ್ಸವದ ಆಚರಣೆ ಅಂತೆಯೇ ಅದರ ಫಲವಾಗಿ ಹಮ್ಮಿಕೊಳ್ಳಲಿರುವ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ವಿವಿಧ ಧಾರ್ಮಿಕ ಹಾಗೂ ಸಮುದಾಯದ ಮುಖಂಡರನ್ನು ನೇಮಿಸಲಾಗಿದೆ’ಎಂದು ತಿಳಿಸಿದರು.
ವಿಕಾರ್‌ ಜನರಲ್‌ ಅತೀ ವಂ. ಮ್ಯಾಕ್ಸಿಂ ನೊರೊನ್ಹಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿಯ ಪ್ರಮುಖರಾದ ವಂ.ಜೆ.ಬಿ ಸಲ್ಡಾನ್ಹಾ, ವಂ.ರೂಪೇಶ್ ಮಾಡ್ತಾ, ವಂ. ಅನಿಲ್ ಫೆರ್ನಾಂಡಿಸ್, ಲೂವಿ ಪಿಂಟೋ,  ರೊಯ್‌ಕ್ಯಾಸ್ಟಲಿನೋ ಕಾರ್ಯಕ್ರಮದ ಬಗ್ಗೆ ವಿವಿಧ ಮಾಹಿತಿಯನ್ನು ನೀಡಿದರು. ಪರಿಷತ್ತಿನ ಕಾರ್ಯದರ್ಶಿ  ಜಾನ್‌ಎಡ್ವರ್ಡ್ ಡಿಸಿಲ್ವಾ ಸ್ವಾಗತಿಸಿದರು. ಬೆಥನಿ ಪ್ರೊವಿನ್ಶಿಯಲ್ ವಂ. ಸಿಸಿಲಿಯಾ ಮೆಂಡೋನ್ಸಾ ಪ್ರಾರ್ಥನಾ ವಿಧಿ ನೆರೆವೆರಿಸಿದರು. ವಂ. ರೂಪೇಶ್ ಮಾಡ್ತಾ ಕಾರ್ಯಕ್ರಮ ನಿರೂಪಿಸಿದರು.

ವಂ.ಡೆನಿಸ್ ಮೋರಸ್ ಪ್ರಭು, ವಂ.ಜೆ.ಬಿಕ್ರಾಸ್ತ, ವಂ. ವಲೇರಿಯನ್‌ಡಿಸೋಜ, ವಂ. ಮಾರ್ಸೆಲ್ ಸಲ್ಡಾನ್ಹಾ, ವಂ. ವಿನ್ಸೇಂಟ್ ಮೊಂತೇರೊ, ವಂ. ಆಸ್ಟಿನ್ ಪೆರಿಸ್, ವಂ. ಜೇಮ್ಸ್ಡಿಸೋಜ, ವಂ. ಒನಿಲ್ ಡಿಸೋಜ, ವಂ. ವಿಜಯ್ ವಿಕ್ಟರ್ ಲೋಬೊ ಹಾಗೂ ಮುಖಂಡರಾದ ಸ್ಟಾನಿ ಲೋಬೊ, ಸುಶೀಲ್ ನೊರೊನ್ಹಾ, ವಲೇರಿಯನ್‌ಮೋರಸ್,  ರಿಚರ್ಡ್ ಮಿನೇಜಸ್,  ಎಲ್. ಜೆ. ಫೆರ್ನಾಂಡಿಸ್‌ ಮತ್ತಿತರರು ಹಾಜರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿಇತರ ಹಲವು ಪ್ರಮುಖ ಧರ್ಮಗುರುಗಳು ಮತ್ತು ಮುಖಂಡರು ಪಾಲ್ಗೊಂಡರು.

Gayathri SG

Recent Posts

ಕಾಂಗ್ರೆಸ್ ಪರ ಮತ ಹಾಕಿಸಿದ್ದಕ್ಕೆ ಯುವಕನ ಕೊಲೆ

ಚುನಾವಣೆ ಮುಗಿದರೂ ಹಗೆತನ ಮುಗಿಯಲಿಲ್ಲ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ. ಜಾವೀದ್ ಚಿನ್ನಮಳ್ಳಿ (25)ಹತ್ಯೆಯಾದವನು. ಕಲಬುರಗಿಯ ಅಫಜಲಪುರ…

11 mins ago

ಆನ್‌ಲೈನ್ ಟ್ರೇಡಿಂಗ್: 17.35 ಲಕ್ಷ ರೂ. ವಂಚನೆ

ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ನ‌ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ.…

31 mins ago

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

52 mins ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

1 hour ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

1 hour ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

2 hours ago