ಮಂಗಳೂರು: ನ್ಯಾಷನಲ್ ಸ್ಕಾಲರ್ಷಿಪ್ ಪೋರ್ಟಲ್ ನ 1ರಿಂದ 8ನೇ ತರಗತಿಯ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಗುತಿದ್ದ ಮೆಟ್ರಿಕ್ ಪೂರ್ವ ಸ್ಕಾಲರ್ಷಿಪ್ ರದ್ದತಿಯನ್ನು ಖಂಡಿಸಿ . ಸರಕಾರಿ ಕಾಲೇಜುಗಳ ಶುಲ್ಕ ಹೆಚ್ಚಳ ವಿರೋಧಿಸಿ. ಪರೀಕ್ಷೆ ಫಲಿತಾಂಶ ವಿಳಂಭದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳು ಬಗೆಹರಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಇದರ ವತಿಯಿಂದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.
ಕಾರ್ಮಿಕ ಮುಖಡರಾದ ಬಿ.ಮ್. ಭಟ್ ಯುವಜನ ಮುಖಂಡರಾದ ಮನೋಜ್ ವಾಮಂಜೂರ್ , ಎಸ್.ಎಫ್.ಐ ಜಿಲ್ಲಾ ಅಧ್ಯಕ್ಷರು ವಿನೀತ್ ದೇವಾಡಿಗ, ಕಾರ್ಯದರ್ಶಿ ರೇವಂತ್ ಕದ್ರಿ, ಜಿಲ್ಲಾ ಪದಾಧಿಕಾರಿಗಳಾದ ವಿನುಶ ರಮಣ ಬಿ ಹಾಗೂ ಶಾಹಿದ್, ಶಮಾಝ್ ಕೆ.ಸಿ. ರೋಡ್ , ತಿಲಕ್ ಕಾತ್ತಾರ್ ,ಸುಪ್ರಿಯಾ, ಅಖಿಲ ಬೆಂಗ್ರೆ ಶಿವಾನಿ ಕಾತ್ತಾರ್ ಇತರರು ಉಪಸ್ಥಿತರಿದ್ದರು.