ಮಂಗಳೂರು: ಮಂಗಳೂರಿನಲ್ಲಿ ಪಕ್ಷದ ನಾಯಕರಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವಿರುದ್ಧ ಯಾರು ಯಾವ ರೀತಿಯ ಹೇಳಿಕೆಗಳನ್ನೂ ಕೊಡಬಾರದು. ಕೆಲವರ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಆಗಿದೆ. ಪಾರ್ಟಿಯ ಶಿಸ್ತು ಮತ್ತು ಅನುಶಾಸನದ ಅಡಿಯಲ್ಲಿ ಕೆಲಸ ಮಾಡಬೇಕು.
ಯಾರೇ ಹೇಳಿಕೆಗಳನ್ನ ಕೊಟ್ರು ಅವರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಪಾರ್ಟಿಯನ್ನ ಗೆಲ್ಲಿಸುವುದೇ ನಮ್ಮ ಕೆಲಸವಾಗ್ಬೇಕು. ಎಲ್ಲಾ ನಾಯಕರು ಮಾತಿನ ಮೇಲೆ ಹಿಡಿತ ಇಟ್ಟು ಮಾತನಾಡಬೇಕು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.