ಮಂಗಳೂರು: ಕಟೀಲು ಮೇಳದಲ್ಲಿ ನಿರಂತರ 42 ವರ್ಷ ಗಳಿಂದ ಕಲಾ ಸೇವೆ ಮಾಡುತ್ತಿರುವ ಹಿರಿಯ ಯಕ್ಷಗಾನ ವೇಷಧಾರಿ ಶ್ರೀಧರ ಪಂಜಾಜೆ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರಿನ ಡಾ. ಬಿ. ನಿಶಾಕಾಂತ ಶೆಟ್ಟಿ ಅವರ ಶ್ರೀ ಕಟೀಲು ಮೇಳ ದ ಸೇವೆ ಆಟ ದ ಸಂಧರ್ಭ ದಲ್ಲಿ, ಹಿರಿಯ ಹವ್ಯಾಸಿ ತಾಳಮದ್ದಳೆ ಕಲಾವಿದ ಕೀರ್ತಿ ಶೇಷ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು.
ಡಾ. ಸುಧಾಕರ ಮಾರ್ಲ ಪಂಜಾಜೆ ಅವರನ್ನು ಅಭಿನಂದಿಸಿದರು. ಹಿರಿಯ ವಿದ್ವಾಂಸ ಡಾ. ಎಮ್. ಪ್ರಭಾಕರ ಜೋಶಿ, ಪ್ರದೀಪ ಕುಮಾರ ಕಲ್ಕೂರ, ಆಸ್ಪ ಲ್ಯಾಂಪ್ ನ ಸುರೇಶ ಬಿ. ಶೆಟ್ಟಿ,ಬಿ. ವಿ . ಹೆಗ್ಡೆ ಶಿರಸಿ, ಸುರೇಶ ವಿ ಹೆಗ್ಡೆ, ಇಂದ್ರಾಳಿ ಶಿವರಾಮ್ ಶೆಟ್ಟಿ,ಬಾಳ ತಿಮ್ಮಪ್ಪ ಶೆಟ್ಟಿ, ಶಿರ್ವ ಕೋಡು ದಿನೇಶ್ ಹೆಗ್ಡೆ, ಸುಧಾಕರ ರಾವ್ ಪೇಜಾವರ, ಎಲ್ಲೂರು ರಾಮಚಂದ್ರ ಭಟ್, ಚೈತ್ರ ಸಾಕೇತ್ ಶೆಟ್ಟಿ ಉಪಸ್ಥಿತರಿದ್ದರು.
ಕದ್ರಿ ಕಂಬಳ ಗುತ್ತು ನವನೀತ ಶೆಟ್ಟಿ ಅವರು ನಿರೂಪಿಸಿದರು. ಕಟೀಲು ಮೇಳದವರಿಂದ “ತ್ರಿಮೂರ್ತಿ ಕಲ್ಯಾಣ” ಯಕ್ಷಗಾನ ಬಯಲಾಟ ನಡೆಯಿತು.
ಬೆಂಗಳೂರು ಬಂಟರ ಸಂಘ ದ ನಿಕಟಪೂರ್ವ ಅಧ್ಯಕ್ಷ ಉಪೇಂದ್ರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದು ವೈದ್ಯಕೀಯ ಸೇವೆಯೊಂದಿಗೆ ಕಲಾ ಪೋಷಣೆ ಮಾಡುತ್ತಿರುವ ನಿಶಾಕಾಂತ ಶೆಟ್ಟಿ ಅವರ ಯಕ್ಷಗಾನ ಅಭಿರುಚಿ ಯನ್ನು ಶ್ಲಾಘಿಸಿದರು.
ನಗರದ ಪ್ರಗತಿ ಮೈದಾನದ ಸುಂರಗ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದು ದೆಹಲಿ ಪೊಲೀಸ್ ಸಿಬ್ಬಂದಿ ಸಾವನಪ್ಪಿದ್ದಾರೆ. ಅಪಘಾತದ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದೆ.…
ಕರ್ನಾಟಕದಲ್ಲಿ ೨ನೇ ಹಂತದ ಚುನಾವಣಾ ಪ್ರಚಾರಕ್ಕೆ ಉಸ್ತುವಾರಿಗಳ ನೇಮಕವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಡಿದ್ದಾರೆ. ಅದರಂತೆ ಚುನಾವಣೆಗೆ ಉಸ್ತುವಾರಿಗಳ…
ಪ್ರವಾಸಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲದ ದಾರುಣ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ.…
ಬಿಹಾರದ ಬೇಗುಸರಾಯ್ ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡ…
ಮುರುಘಾ ಮಠದ ವಸತಿ ಶಾಲ ವಿದ್ಯಾರ್ಥಿನಿಯರ ಮೇಲಿನ ಅತ್ಯಚಾರ ಪ್ರಕರಣದಲ್ಲಿ ಜಾಮನೀನು ಪಡೆದು ಹೊರ ಬಂದಿದ್ದ ಮುರುಘಾ ಶ್ರೀಗಳಿಗೆ ಪುನಃ…
ಕೇಂದ್ರ ಸಚಿವ ಅಮಿತ್ ಶಾ ಕುರಿತಾದ ನಕಲಿ ವಿಡಿಯೋವನ್ನು ʻಎಕ್ಸ್ʼನಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಮೇ 1ರಂದು ವಿಚಾರಣೆಗೆ ಹಾಜರಾಗುವಂತೆ…