ಮಂಗಳೂರು: ನಗರ ಉತ್ತರ ವಿಧಾನಸಭಾ ಕ್ಷೇತ್ರದ ಹೊಸಬೆಟ್ಟು 8ನೇ ವಾರ್ಡ್ನಲ್ಲಿ ಬಿಜೆಪಿ ಸಾಧನಾ ಸಮಾವೇಶ ಹಾಗೂ ಕ್ರೀಡಾ ಸಂಸ್ಥೆಗಳಿಗೆ ಕ್ರೀಡಾ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.
ಈ ಸಂದರ್ಭ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ನಡೆಸಿದ ಶಾಸಕರನ್ನು ಪ್ರಮುಖರು ಸಮ್ಮಾನಿಸಿದರು. ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯರಾದ ವರುಣ್ ಚೌಟ, 9ನೇ ವಾರ್ಡ್ ಮನಪಾ ಸದಸ್ಯೆ ವೇದಾವತಿ, ಶಕ್ತಿಕೇಂದ್ರದ ಅಧ್ಯಕ್ಷ ವಿಠಲ್ ಸಾಲ್ಯಾನ್, ಬಿಜೆಪಿ ಪ್ರಮುಖರಾದ ಆನಂದ ಭಂಡಾರಿ, ಸುನಿಲ್ ಕುಳಾಯಿ, ವಸಂತ್ ಹೊಸಬೆಟ್ಟು ಪದ್ಮನಾಭ ಸುವರ್ಣ, ಒಂಪ್ರಕಾಶ್, ಶೆಟ್ಟಿಗಾರ್, ರಮಾನಾಥ ಕೋಡಿಕೆರೆ, ತಿರುಮಲೇಶ್ ಅಶೋಕ್, ಇಂದಿರಾ, ಅಶದ್ ಕೋಡಿಕೆರೆ, ಕುಮಾರೇಶ್, ಉಮೇಶ್, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.