ಮಂಗಳೂರು: ಎಸ್ ಡಿಪಿಐ ಮತ್ತು ಪಿಎಫ್ ಐ ನಾಯಕರ ಮನೆ ಹಾಗೂ ಕಚೇರಿ ಮೇಲಿನ ಎನ್ಐಎ ದಾಳಿಯನ್ನು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 3ಮೂವತ್ತು ರಿಂದ ಅಕ್ರಮವಾಗಿ ಪಕ್ಷದ ಕಚೇರಿಗೆ ಮನೆಗಳಿಗೆ ನುಗ್ಗಿ ದಾಂಧಲೆ ಮಾಡಿ ದಾಖಲೆ ಪತ್ರವನ್ನು ಹಿಡಿದುಕೊಂಡು ಹೋಗಿದ್ದಾರೆ . ನಮ್ಮ ಕಚೇರಿಗೆ ಬರುವ ಆದೇಶ್ ಅವರ ಬಳಿ ಇರಲಿಲ್ಲ ಇದು ಅಕ್ರಮ ದಾಳಿಯಾಗಿದೆ .ಕಟ್ಟಡದ ಅಗ್ರಿಮೆಂಟ್ ಕಾಪಿ ನಾವು ಮಾಡಿದ ಕಾರ್ಯಕ್ರಮದ ಫೈಲ್ ಫೋಟೋ ಆಲ್ಬಮ್ ಲ್ಯಾಪ್ಟಾಪ್ ಕೊಂಡು ಹೋಗಿದ್ದಾರೆ ಬಿಟ್ಟರೆ ಇನ್ನೇನೂ ಸಿಕ್ಕಿಲ್ಲ ಎನ್ಐಎ ಅಕ್ರಮ ಪ್ರವೇಶ ನಿಷೇಧ ಖಂಡಿಸಿ ಉನ್ನತ ಮಟ್ಟದ ಹೋರಾಟ ಮಾಡಲು ಯೋಚಿಸುತ್ತಿದ್ದೇವೆ .ಪಿಎಫ್ಐ 1ಸಾಮಾಜಿಕ ಸಂಘಟನೆ ಯಾಗಿದೆ ಅಕ್ರಮವಾಗಿ ಬಂಧಿಸಿದ ನಮ್ಮ ಪಕ್ಷದ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಇಲ್ಲದೇ ಹೋದಲ್ಲಿ ನಾವು ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದರು.
ಇದು ರಾಜಕೀಯ ಪ್ರೇರಿತವಾದ ದಾಳಿಯೆಂದು ಅವರು ನಮ್ಮ ಪಕ್ಷದ ಏಳಿಗೆಯನ್ನು ಸಹಿಸದೆ ಮಟ್ಟಹಾಕಲು ದಾಳಿ ಆಯೋಜಿಸಲಾಗಿದೆ ಜನಸಾಮಾನ್ಯರ ನೋವಿಗೆ ಸ್ಪಂದಿಸದ ಬಿಜೆಪಿ ಇಂಥ ದಾಳಿಗಳನ್ನು ಆಯೋಜಿಸುವ ಮೂಲಕ ಇಲ್ಲಿನ ಸಮಸ್ಯೆಗಳನ್ನು ಮರೆಮಾಚಲು ಯತ್ನಿಸಿದೆ . ಮುಂದಿನ ಇಪ್ಪತ್4ಗಂಟೆಯೊಳಗೆ ನೀವು ಬಂಧನ ಮಾಡಿರುವ ನಮ್ಮ ನಾಯಕರನ್ನು ಬಿಡುಗಡೆ ಮಾಡಬೇಕು ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಜೋಕಟ್ಟೆ ಜಲೀಲ್ ಕೃಷ್ಣಾಪುರ ಮೊದಲಾದವರಿದ್ದರು.