ಮಂಗಳೂರು: ನ್ಯೂಸ್ ಕರ್ನಾಟಕದ ದಶಮಾನೋತ್ಸವದ ಅಂಗವಾಗಿ ಥ್ಯಾಂಕ್ಯೂ ಕರ್ನಾಟಕ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಮೈಲಿಗಲ್ಲು ಸಾಧಿಸಲು ಸ್ಪಿಯರ್ ಹೆಡ್ ಮೀಡಿಯಾ ಸಮೂಹವನ್ನು ಬೆಂಬಲಿಸಿದ್ದಕ್ಕಾಗಿ ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಸಂಸ್ಥೆ ಧನ್ಯವಾದ ಸಲ್ಲಿಸಿದೆ.
ಥ್ಯಾಂಕ್ಯೂ ಕರ್ನಾಟಕ ಸರಣಿಯಡಿ ಪ್ರತಿ ಗುರುವಾರ ಪ್ರಸಾರವಾಗುವ ಮಹಿಳೆಯರು, ಉದ್ಯಮಿಗಳು ಮತ್ತು ಸಾಧಕರನ್ನು ಉತ್ತೇಜಿಸುವ ಕಾರ್ಯಕ್ರಮಗಳಲ್ಲಿ ವುಮೆನ್ನಿಯಾ ಕಾರ್ಯಕ್ರಮವು ಒಂದು.
ಏಪ್ರಿಲ್ 6 ರ ಗುರುವಾರ ಪ್ರಸಾರವಾದ 24 ನೇ ಸಂಚಿಕೆಯ ಅತಿಥಿಯಾಗಿ ಬಿಸಿನೆಸ್ ತರಬೇತುದಾರ ದಿವ್ಯಾ ಡಿಸೋಜಾ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಿರೂಪಕಿ ಅನನ್ಯಾ ಹೆಗ್ಡೆ ನಿರೂಪಿಸಿದರು.
ಈ ಕಾರ್ಯಕ್ರಮವನ್ನು ನ್ಯೂಸ್ ಕರ್ನಾಟಕ.ಕಾಂ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಯಿತು.
ದಿವ್ಯಾ ಡಿಸೋಜಾ ತಮ್ಮ ಬಾಲ್ಯದ ಬಗ್ಗೆ ಮಾತನಾಡಿ ನಾನು ಶಾಲೆಯಲ್ಲಿ ಅತ್ಯಂತ ತುಂಟ ವಿದ್ಯಾರ್ಥಿಯಾಗಿದ್ದೆ ಮತ್ತು ನನ್ನ ಸಹಪಾಠಿಗಳಿಗೆ ಹೊಡೆಯುವ, ಕೀಟಲೆ ಮಾಡುವ ಸ್ವಭಾವದಿಂದ ಪ್ರತಿ ವಾರವೂ ಪೋಷಕರನ್ನು ಕರೆತರುವಂತೆ ಶಿಕ್ಷಕರು ಆದೇಶಿಸುತ್ತಿದ್ದರು ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.
ನಾನು ವ್ಯಾಪಾರಿಗಳ ಕುಟುಂಬದಲ್ಲಿ ಬೆಳೆದು, ವ್ಯಾಪಾರ ಮಾಡುವ ಕುಟುಂಬದೊಂದಿಗೆ ವಿವಾಹವಾದ ನಂತರ, ನಾನು ಸಹ ವ್ಯವಹಾರಕ್ಕೆ ಸಹಾಯ ಮಾಡಲು ನಿರ್ಧರಿಸಿದೆ ” ಎಂದು ಮನದಾಳ ಹಂಚಿಕೊಂಡರು.
ನನ್ನ ಜೀವನದಲ್ಲಿ ಮಾವ ಸೇರಿದಂತೆ ಕುಟುಂಬದ ಎಲ್ಲರೂ ಅತ್ಯುತ್ತಮ ಸಹಕಾರ ಒದಗಿಸಿ, ಜೀವನದಲ್ಲಿ ಸಾಧನೆ ಮಾಡಲು ಉನ್ನತ ಸಹಕಾರ ಒದಗಿಸಿದ್ದಾರೆ. ನೈರ್ಮಲ್ಯ, ಗುಣಮಟ್ಟ ಮತ್ತು ಸೇವೆ ಆಹಾರ ಉದ್ಯಮದಲ್ಲಿ ಮಹತ್ವದ ವಿಷಯಗಳಾಗಿವೆ ಎಂದು ದಿವ್ಯಾ ಅನುಭವ ಹಂಚಿಕೊಂಡರು.
ನಾನು ಅದನ್ನು ವ್ಯವಹಾರವೆಂದು ಪರಿಗಣಿಸದೇ ಜೀವನದ ಭಾಗವೆಂದು ನಿಶ್ಚಯಿಸಿ ಮುಂದುವರಿದ ಕಾರಣ ಅದರಲ್ಲಿ ಸಂತೃಪ್ತಿ ದೊರೆತಿದೆ ಎಂದರು.
ಜಗತ್ತಿನಲ್ಲಿ ಟೀಕೆ, ಟಿಪ್ಪಣಿಗಳಿಗೆ ಕಿವಿಯಾಗದೇ ಸಾಧನೆಯ ಹಾದಿಯಲ್ಲಿ ಮುಂದುವರಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಉದ್ಯಮ ಯಶಸ್ಸಿನ ಸೂತ್ರವನ್ನು ವಿವರಿಸಿದರು.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…