ಮಂಗಳೂರು: ಕುಳಾಯಿ ಹೊನ್ನಕಟ್ಟೆ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿ ಸಮೀಪ ಸಾರ್ವಾಜನಿಕ ರಸ್ತೆಯನ್ನು ಮುಚ್ಚಿರುವ ಬಗ್ಗೆ ಹಾಗೂ ನೀರಿನ ಬಾವಿಯನ್ನೂ ಅನಧಿಕೃತವಾಗಿ ಮುಚ್ಚಲೂ ಮುಂದಾಗಿದ್ದಾರೆ ಹಾಗೂ ಈ ಬಗ್ಗೆ ಅಧಿಕಾರಿಗಳೂ ನ್ಯಾಯಾಲಯ ಆದೇಶ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯರಿಂದ ಪ್ರತಿಭಟನಾ ಸಭೆ ಗುರುವಾರ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ನಡೆಯಿತು.
ಸ್ಥಳೀಯರಾದ ವಿಶ್ವನಾಥ್ ಜೆ, ಮಧುಸೂದನ್, ಸತೀಶ್ ಅಮೀನ್, ದಿನೇಶ್ ದೇವಾಡಿಗ, ಶೇಖರ್ ದೇವಾಡಿಗ, ಹಿಂದೂ ಮಹಾಸಭಾದ ಧರ್ಮೇಂದ್ರ ಪ್ರಧಾನ್ ಮೊದಲಾದವರು ಇದ್ದರು.