ಮಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ಎರಡನೆ ಪಟ್ಟಿಯಲ್ಲಿ 100 ಕ್ಷೇತ್ರಕ್ಕೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಕೇಂದ್ರದ ನಾಯಕರಿಗೆ ಕಳುಹಿಸಿದೆ.
ಈ ಮೊದಲು 224 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕೆಪಿಸಿಸಿ ಕಳುಹಿಸಿ ಕೊಟ್ಟಿದ್ದು, 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಬಾಕಿ ಉಳಿದ 100 ಕ್ಷೇತ್ರಗಳಿಗೆ ಕೆಲ ಅಭ್ಯರ್ಥಿಗಳನ್ನು ಬದಲಾಯಿಸಿ ಪರಿಷ್ಕೃತ ಸಂಭಾವ್ಯ ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕೆಪಿಸಿಸಿ ನಾಯಕರು ಕಳುಹಿಸಿಕೊಟ್ಟಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಲ್ಲವ ನಾಯಕ ಪದ್ಮರಾಜ್ ಹೆಸರು ವ್ಯಾಪಕವಾಗಿ ಕೇಳಿ ಬಂದಿತ್ತು, ಆದರೆ ಈಗ ಎರಡನೇ ಸಂಭ್ಯಾವರ ಪಟ್ಟಿಯಲ್ಲಿ ಅವರ ಹೆಸರೆ ಇಲ್ಲ. ಬದಲಾಗಿ ಮಾಜಿ ಶಾಸಕ ಜೆ. ಆರ್. ಲೋಬೊ ಹಾಗೂ ಐವನ್ ಡಿಸೋಜ ಹೆಸರು ಚಾಲ್ತಿಯಲ್ಲಿ ಇವೆ. ಇನ್ನೂ ಮಂಗಳೂರು ಉತ್ತರ ಕ್ಷೇತವ ಕೂಡ ಕಾಂಗ್ರೆಸ್ ಕಗ್ಗಂಟಾಗಿದ್ದ ಕ್ಷೇತ್ರ, ಇಲ್ಲಿಯೂ ಕೂಡ ಮಾಜಿ ಶಾಸಕ ಮೊಯಿದ್ದೀನ್ ಬಾವಾ, ಇನಾಯಿತ್ ಅಲಿ ಮುಂಚೂಣಿಯಲ್ಲಿ ಇದ್ದಾರೆ. ಇನ್ನೂ ಪುತ್ತೂರು ಕ್ಷೇತ್ರಕ್ಕೆ ಒಟ್ಟು ಮೂರು ಮಂದಿ ಹೆಸರು ಸಂಭ್ಯಾವರ ಪಟ್ಟಿಯಲ್ಲಿ ಇವೆ. ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸತೀಶ್ ಕೆಂದೇಜಿ ಅವರ ಹೆಸರು ಇವೆ. ಉಡುಪಿ ಕ್ಷೇತ್ರದಿಂದ ರಮೇಶ್ ಕಾಂಚನ್, ಪ್ರಸಾದ್ ಕಾಂಚನ್, ಶಿವಮೊಗ್ಗದಿಂದ ಪ್ರಸನ್ನ ಕುಮಾರ್ ಕೆ.ಬಿ, ಸುಂದರೇಶ್, ತೀರ್ಥಹಳ್ಳಿಯಿಂದ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ, ಕಾರ್ಕಳದಿಂದ ಮಂಜುನಾಥ್ ಪೂಜಾರಿ, ಸುರೇಂದ್ರ ಶೆಟ್ಟಿ ಮೂಡಿಗೆರೆಯಿಂದ ನಯನಾ ಮೋಟಮ್, ಚಿಕ್ಕಮಗಳೂರಿನಿಂದ ತಮ್ಮಯ್ಯ , ಹರೀಶ್ ಅವರ ಹೆಸರನ್ನು ಅಖೈರುಗೊಳಿಸಿ ಕೇಂದ್ರ ನಾಯಕರಿಗೆ ಕಳುಹಿಸಿದೆ.