ಮಂಗಳೂರು: ನಿಧಿಲ್ಯಾಂಡ್ ಇನ್ಪ್ರಸ್ಟ್ರಚರ್ ಡೆವಲಪರ್ಸ್ ನ ನಿಧಿ ಲ್ಯಾಂಡ್ “ಸು-ಧಾಮ್” ನೂತನ ವಸತಿ ಸಮುಚ್ಚಯವು ಮಂಗಳೂರಿನ ಕೊಟ್ಟಾರ ಚೌಕಿಯ ಅಬ್ಬಕ ನಗರದಲ್ಲಿ ಶುಭಾರಂಭಗೊಂಡಿತು.
ನೂತನ ವಸತಿ ಸಮುಚ್ಚಯಕ್ಕೆ ಬ್ರಹ್ಮ ಕುಮಾರಿ ಸಮಾಜದ ಸಂಚಾಲಕಿ ರಾಜಯೋಗಿನಿ ಬಿ.ಕೆ ವಿಶ್ವೇಶ್ವರಿ ಜೀ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಸದಿಗಂತ ಪತ್ರಿಕೆಯ ಸಿಇಒ ಪ್ರಕಾಶ್ ಪಿ.ಎಸ್, ಮಂಗಳೂರು ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ಮಂಗಳೂರು ಮನಪಾ ಸದಸ್ಯ ಮನೋಜ್ ಕುಮಾರ್, ನಿಧಿಲ್ಯಾಂಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಕೆ ಸನೀಲ್ ಮತ್ತಿತ್ತರರು ಉಪಸ್ಥಿತರಿದ್ದರು.