ಮಂಗಳೂರು: ನವ ಮಂಗಳೂರು ಬಂದರಿನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕಂಟೇನರ್ ಟರ್ಮಿನಲ್ಗೆ ಕಂಟೇನರ್ಗಳನ್ನು ಹೊತ್ತ ಹಡಗು ‘ಎಂವಿ ಹಾಂಗ್ ಎಎನ್’ ಶುಕ್ರವಾರ ಆಗಮಿಸಿದೆ.
ಚಿತ್ತಗಾಂಗ್ – ಕೊಲಂಬೊ – ಮಂಗಳೂರು – ನವಾ ಶೇವಾ – ಮುಂದ್ರಾ ಮಾರ್ಗವಾಗಿ ಪೂರ್ವಕ್ಕೆ ಜೆಬೆಲ್ ಅಲಿ- ಖಲೀಫಾ ಬಂದರು ಮಾರ್ಗದಲ್ಲಿ ಈ ಹಡಗು ಸಂಚರಿಸುತ್ತಿದೆ. ಭಾರತದ ರಫ್ತುದಾರ ಜೆಬೆಲ್ ಅಲಿ, ಅಬುಧಾಬಿ ಗೆ ನೇರ ಸೇವೆಯನ್ನು ಒದಗಿಸಲಿದೆ. ಅಮೆರಿಕ ಯುರೋಪ್, ಆಸ್ಟ್ರೇಯ ಏಶ್ಯ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಸಾಮಗ್ರಿ ತಲುಪಿಸಲು ಸಹಕಾರಿಯಾಗಲಿದೆ.
ಎನ್ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ ಅವರು ಮೊದಲ ನೇರ ಮೇನ್ಲೈನ್ ಸೇವೆಯನ್ನು ಉದ್ಘಾಟಿಸಿದರು. ಹೆಡ್ ಇಂಡಿಯಾ ಆಪರೇಷನ್ಸ್ ಸಿಎಂಎ- ಸಿಜಿಎಂ ಕ್ಯಾಪ್ಟನ್ ಸಾಗರ್ ಡಾಂಗೆ, ಉಪಾಧ್ಯಕ್ಷ ರಾಮನಾಥನ್ ಉಪಸ್ಥಿತರಿದ್ದರು.
ಜೆಬೆಲ್ ಅಲಿ ಬಂದರಿಗೆ ಹಿಂದೆ ಕಂಟೇನರ್ ಹಡಗು ತಲುಪಲು 13-15 ದಿನಗಳು ಬೇಕಾಗಿತ್ತು. ಹೊಸ ಹಡಗು ಒಂದು ವಾರದಲ್ಲಿ ತಲುಪಲಿದೆ. ಸಾಗಾಟ ವೆಚ್ಚ ಕೂಡಾ ಕಡಿಮೆಯಾಗಲಿದೆ. ಜಲ ಮತ್ತು ವಾಯು ಮಾರ್ಗದಲ್ಲಿ ಕಾರ್ಗೊ ಸಾಗಾಟಕ್ಕೆ ಇದು ಸಹಕರಾರಿಯಾಗಿದೆ.
ಕಂಟೇನರ್ ಹಡಗಿನ ಸೇವೆಯು ಔಷಧ, ಹಣ್ಣು, ತರಕಾರಿ ಬೇಗನೆ ಮಾರುಕಟ್ಟೆ ತಲುಪಲು ನೆರವಾಗಲಿದ್ದು, ಕರ್ನಾಟಕದಿಂದ ವಿಶೇಷವಾಗಿ ಕೃಷಿ ಉತ್ಪನ್ನಗಳ ರಫ್ತು ಮಾಡಲು ಪ್ರಮುಖ ಉತ್ತೇಜನ ದೊರೆಯುವುದನ್ನು ನಿರೀಕ್ಷಿಸಲಾಗಿದೆ ಎಂದು ನವಮಂಗಳೂರು ಮೂಲಗಳು ತಿಳಿಸಿವೆ.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ.
ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…
ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…