News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಹಿರಿಯ ಕ್ರೀಡಾಪಟುಗಳನ್ನು ಸನ್ಮಾನಿಸುವುದು ಇತರ  ಕ್ರೀಡಾಳುಗಳಿಗೆ ಆದರ್ಶ- ನಾಗರಾಜ ಶೆಟ್ಟಿ

Felicitating senior achievers is a role model for other sportspersons, says Nagaraj Shetty
Photo Credit : Facebook

ಮಂಗಳೂರು: ಮಂಗಳೂರು ಕ್ರೀಡಾಭಾರತಿ ವತಿಯಿಂದ  “ಹಾಕಿ ಮಾಂತ್ರಿಕ ಖೇಲ್ ರತ್ನ ಮೇಜರ್ ಧ್ಯಾನಚಂದ್” ಇವರ ಹುಟ್ಟುಹಬ್ಬದ ಅಂಗವಾಗಿ “ ರಾಷ್ತ್ರೀಯ ಕ್ರೀಡಾ ದಿನ “ದಂದು ಕ್ರೀಡಾರಂಗದಲ್ಲಿ ಉನ್ನತ ಸಾಧನೆ ಗೈದ ಹಿರಿಯ ಕ್ರೀಡಾಪಟುಗಳಾದ, ಬಿ ಕಮಲಾಕ್ಷ ಆಮೀನ್ , ಕೆ ಮಹಾಬಲ ಶೆಟ್ಟಿ, ನಗರ್ ನಾರಾಯಣ ಶೆಣೈ , ಮೇರಿ ಹಿಲ್ಡಾ ಡಿಸೋಜಾ ಅವರ ಸ್ವಗ್ರಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಕ್ರೀಡಾಭಾರತಿ ಉಪಾಧ್ಯಕ್ಷರು, ಮಾಜಿ ಉಸ್ತುವಾರಿ ಸಚಿವರಾದ  ಬಿ ನಾಗರಾಜ ಶೆಟ್ಟಿ ಯವರು ಮಾತಾನಾಡಿ “ ಹಿರಿಯ ಸಾಧಕರನ್ನು ಸನ್ಮಾನಿಸುವುದರಿಂದ ಇತರ ಕ್ರೀಡಾಳುಗಳಿಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉನ್ನತ ಮಟ್ಟದಲ್ಲಿ ಸಾಧನೆಗೈಯಲು ಅದುವೇ ಪ್ರೇರಣೆ . ಇಂಥಹ ಸಾದಕರನ್ನು ಗುರುತಿಸಿ ಗೌರವಿಸುವುದು ನಮಗೆ ಹೆಮ್ಮೆ ಎಂದರು”.

ಈ ವರ್ಷದ “ಕ್ರೀಡಾಭಾರತಿ ಧ್ಯಾನಚಂದ್ ಪ್ರಶಸ್ತಿ 2022”ನ್ನು ಹಿರಿಯ ಪವರ್ ಲಿಫ್ಟರ್ ಹಾಗು ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ವೆಯಿಟ್ ಲಿಫ್ಟರ್ ಶ್ರೀ ನಗರ್ ನಾರಾಯಣ ಶೆಣೈ ಯವರಿಗೆ ನೀಡಿ, ಅವರ ಸಾಧನೆಯನ್ನು ಗುರಿತಿಸಲಾಯಿತು.

ಅದೇ ರೀತಿ ಉನ್ನತ ಕ್ರೀಡಾ ಸಾಧನೆ ಮಾಡಿರುವ  ಬಿ ಕಮಲಾಕ್ಷ ಆಮೀನ್, ಮೇರಿ ಹಿಲ್ಡಾ ಡಿಸೋಜಾ ಮತ್ತು  ಕೆ. ಮಹಾಬಲ ಶೆಟ್ಟಿ ಈ ಮೂವರಿಗೆ “ ಕ್ರೀಡಾಭಾರತಿ ಕ್ರೀಡಾ ಸಾಧಕ ಪ್ರಶಸ್ತಿ”ನೀಡಿ ಗೌರವಿಸಲಾಯಿತು .

ಕ್ರೀಡಾ ಭಾರತೀಯ ಅಧ್ಯಕ್ಷರಾದ ಕಾರಿಯಪ್ಪ ರೈ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಭೋಜರಾಜ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಎ. ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಪ್ರೇಮನಾಥ್ ಉಳ್ಳಾಲ್ , ಉಪಾಧ್ಯಕ್ಷರಾದ ದಯಾನಂದ ಮಾಡ, ಎ ಪಿ ಪ್ರಭು, ಮಹಿಳಾ ಪ್ರಮುಖ್ ಹೇಮಪ್ರಭ ಲೈಲಾ, ಜೊತೆ ಕಾರ್ಯದರ್ಶಿಗಳಾದ ಹರೀಶ್ ರೈ, ಕರುಣಾಕರ್ ಶೆಟ್ಟಿ, ಸಹ ಮಹಿಳಾ ಪ್ರಮುಕ್ ಉಷಾ ರಾಣಿ, ಚಂಚಲಾಕ್ಷಿ, ಆರತಿ ಶೆಟ್ಟಿ, ದಿವ್ಯ, ಶಾಂಭವಿ , ನಿಶ್ಮಿತಾ ಮತ್ತು ಕ್ರೀಡಾ ಭಾರತೀಯ ಸದಸ್ಯರು ಸನ್ಮಾನಿತರ ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು