ಮಂಗಳೂರು: ಹಿಂದೆಲ್ಲ ಬಿಜೆಪಿಯದ್ದು ಮೂರು ಬಾಗಿಲು ಇತ್ತು ಈಗ 25 ಬಾಗಿಲು ಆಗಿದೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿ ಅವರು ಯಾರೂ ಮುಖ್ಯಮಂತ್ರಿ ರೇಸ್ ಗೆ ಬರದಂತೆ ಮಾಡಿದ್ದಾರೆ. ಕೆಎಂಎಫ್ ಅಮೂಲ್ ವಿಲೀನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಹೈನುಗಾರಿಕೆ ಕಡಿಮೆಯಾಗಿದೆ. ಉತ್ಪಾದನೆ ಕಡಿಮೆಯಾಗಿ ಅಮೂಲ್ ತರಲು ತಯಾರಿ ನಡೆಸಿದ್ದಾರೆ. ಉತ್ಪಾದನೆ ಕಡಿಮೆ ಆಗುವಂತೆ ಮಾಡಿದ್ದೇ ಬಿಜೆಪಿಯವರು. ಕಾಂಗ್ರೆಸ್ ಸರ್ಕಾರ ಬಂದ್ರೆ ರೈತರಿಗೆ ನ್ಯಾಯ ಸಿಗುತ್ತದೆ. ನಾವು ಕೆಎಂಎಫ್ ವಿಲೀನ ಮಾಡಲು ಬಿಡುವುದಿಲ್ಲ ಎಂದರು.