ಮಂಗಳೂರು: ಕೊಳಂಬೆ ಪ್ರದೇಶದ ಮನೆಗಳಿಗೆ ಕಾಂಗ್ರೆಸ್ ಮಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಇನಾಯತ್ ಅಲಿ ಭೇಟಿ ನೀಡಿದರು. ಈ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದ್ದು, ನೀರಿನ ಅಭಾವ, ವಿದ್ಯುತ್ ವ್ಯತ್ಯಯ ಸೇರಿದಂತೆ ಹಲವು ದಿನಗಳಿಂದ ಅಲ್ಲಿನ ಸ್ಥಳೀಯರು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಪರಿಹರಿಸುವುದಾಗಿ ಭರವಸೆ ನೀಡಿದರು.
ಅದೇ ರೀತಿ ಬಜಪೆಯ ಸೌಹಾರ್ದ ನಗರದಲ್ಲಿ ಇನಾಯತ್ ಸಭೆ ನಡೆಸಿದರು. ಭ್ರಷ್ಟಾಚಾರ, ಕೋವಿಡ್ ನಿರ್ವಹಣೆ ವೈಫಲ್ಯದಿಂದ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಜನರಿಗೆ ಟ್ರಬಲ್ ಇಂಜಿನ್ ಸರ್ಕಾರವಾಗಿ ಪರಿಣಮಿಸಿದೆ. ಕರುನಾಡಿಗೆ ಕಾಂಗ್ರೆಸ್ ಹೊಸ ಬದಲಾವಣೆ ನೀಡಲಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಜನರಲ್ಲಿ ಕೋರಿದರು.
ಕೊಳಂಬೆಯ ಬೊಂಟ್ರಗುಡ್ಡೆ ಶ್ರೀ ಕೋರ್ದಬ್ಬು ದೈವಸ್ಥಾನಕ್ಕೆ ಭೇಟಿ ನೀಡಿದರು. ಕರಾವಳಿ ಪ್ರದೇಶದ ಜನರಿಗೆ ಸರ್ವ ಕಾರ್ಯಕ್ಕೂ ದೈವಗಳ ಅನುಗ್ರಹ ಮುಖ್ಯ ಎಂದು ಈ ವೇಳೆ ಹೇಳಿದರು.
ನಂತರ ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಕ್ಷೇತ್ರದ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.