ಮಂಗಳೂರು

ಮಂಗಳೂರು: ಸಂಕಷ್ಟದಲ್ಲಿ ದ.ಕ ಹಾಲು ಉತ್ಪಾದಕರ ಒಕ್ಕೂಟ, ಹಾಲಿನ ವಿಶೇಷ ಪ್ರೋತ್ಸಾಹ ಧನಕ್ಕೆ ಕತ್ತರಿ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯ ವ್ಯಾಪ್ತಿಯ ಒಕ್ಕೂಟದಲ್ಲಿ 734 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಪ್ರತಿದಿನ 5.70 ಲಕ್ಷ ಲೀಟರ್ ಹಾಲು ಶೇಖರಣೆ ಗುರಿ ಇದೆ. ಆದರೆ ಅನಿರೀಕ್ಷಿತ ಮಳೆ, ಜಾನುವಾರುಗಳ ಚರ್ಮಗಂಟು ರೋಗ ಮತ್ತು ಪಶು ಆಹಾರದ ದರ ಹೆಚ್ಚಳದಿಂದ ಹಾಲಿನ ಶೇಖರಣೆ ಕಡಿಮೆಯಾಗಿದ್ದು, ಒಕ್ಕೂಟದಲ್ಲಿ ಹಾಲಿನ ಶೇಖರಣೆ ಸರಾಸರಿ 4.70 ಲಕ್ಷ ಲೀಟರ್‌ನಷ್ಟಿದೆ. ಸುಮಾರು 70 ಸಾವಿರ ಲೀ. ಹಾಲಿನ ಕೊರತೆ ಕಂಡುಬಂದಿದೆ. ಹೀಗಾಗಿ ಹೈನುಗಾರರಿಗೆ ನೀಡುತ್ತಿದ್ದ ವಿಶೇಷ ಪ್ರೋತ್ಸಾಹ ಧನದಲ್ಲಿ 1.05 ರೂ. ಹಿಂತೆಗೆಯಲಾಗಿದೆ.

ಒಕ್ಕೂಟದಿಂದ ಪ್ರಸ್ತುತ ಪ್ರತೀ ಲೀ. ಹಾಲಿಗೆ 2.05 ರೂ. ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಅದರಲ್ಲಿ 1.05 ರೂ. ಹಿಂಪಡೆಯಲಾಗಿದೆ. ಸಂಘಗಳ ಅಭಿವೃದ್ಧಿಯನ್ನು ಗಣನೆಗೆ ಪರಿಗಣಿಸಿ ಪ್ರತಿ ಲೀಟರ್‌ಗೆ 5 ಪೈಸೆ ಮಾರ್ಜಿನ್ ಹೆಚ್ಚಿಸಿ ಬುಧವಾರದಿಂದ 1 ರೂ. ವಿಶೇಷ ಪ್ರೋತ್ಸಾಹ ಧನ ಮುಂದುವರಿಸಲಾಗಿದೆ.

ಹಾಲಿನ ಕೊರತೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯ ವ್ಯಾಪ್ತಿಯ ಒಕ್ಕೂಟದಲ್ಲಿ 734 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಪ್ರತಿದಿನ 5.70 ಲಕ್ಷ ಲೀ. ಹಾಲು ಶೇಖರಣೆ ಗುರಿ ಇದೆ. ಆದರೆ ಅನಿರೀಕ್ಷಿತ ಮಳೆ, ಜಾನುವಾರುಗಳ ಚರ್ಮಗಂಟು ರೋಗ ಮತ್ತು ಪಶು ಆಹಾರದ ದರ ಹೆಚ್ಚಳದಿಂದ ಹಾಲಿನ ಶೇಖರಣೆ ಕಡಿಮೆಯಾಗಿದ್ದು, ಒಕ್ಕೂಟದಲ್ಲಿ ಹಾಲಿನ ಶೇಖರಣೆ ಸರಾಸರಿ 4.70 ಲಕ್ಷ ಲೀಟರ್‌ನಷ್ಟಿದೆ. ಸುಮಾರು 70 ಸಾವಿರ ಲೀ. ಹಾಲಿನ ಕೊರತೆ ಕಂಡುಬಂದಿದೆ.

ಖರೀದಿ ದರ ಹೆಚ್ಚಳ

ಹಿಂದೆ ಇತರ ಒಕ್ಕೂಟಗಳಿಂದ 1 ಲೀ ಟರ್‌ಗೆ 30 ರೂಪಾಯಿನಂತೆ ಹಾಲು ಖರೀದಿಸಲಾಗುತ್ತಿತ್ತು. ಈಗ ಹಾಲಿನ ಕೊರತೆಯಿಂದಾಗಿ 36.50 ರೂಪಾಯಿನಂತೆ ಪಾವತಿಸಬೇಕಿದ್ದು, ಒಕ್ಕೂಟಕ್ಕೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಹಿಂದೆ ಹಾಲಿನ ಪುಡಿ ಕೆ.ಜಿ.ಗೆ 215ರಿಂದ 230 ರೂಪಾಯಿ ಇತ್ತು. ಈಗ ಹಾಲಿನ ಪುಡಿ ದರ 350ರಷ್ಟು ಏರಿಕೆಯಾಗಿದ್ದು, ಹಾಲಿನ ಪುಡಿಯನ್ನು ಹಾಲಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಿದಾಗ ಹೆಚ್ಚಿನ ನಷ್ಟ ಉಂಟಾಗುತ್ತಿದೆ.

ಸಿಂಗಪುರದಲ್ಲೂ ನಮ್ಮ ‘ನಂದಿನಿ’ ಹವಾ, ಹಾಲು ರಫ್ತಿಗೆ ಒಪ್ಪಂದ, ₹500 ಕೋಟಿ ವಹಿವಾಟು ನಿರೀಕ್ಷೆ

2022ರ ಅಕ್ಟೋಬರ್‌ನಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ ಪ್ರತಿ ಲೀಟರ್‌ಗೆ ಕನಿಷ್ಠ ದರ 29 ರೂ. ನೀಡಲಾಗುತ್ತಿತ್ತು. ಒಕ್ಕೂಟದ ಲಾಭಾಂಶದಿಂದ ಪ್ರತಿ ಲೀಟರ್‌ಗೆ ವಿಶೇಷ ಪ್ರೋತ್ಸಾಹ ಧನವಾಗಿ ಖರೀದಿ ದರ 2.05 ರೂಪಾಯಿ ಹೆಚ್ಚಳ ಮಾಡಿ, 31.05 ರೂಪಾಯಿ ಮತ್ತು ಮುಂದೆ ಸರಕಾರದ ನಿರ್ದೇಶನ ಹಾಗೂ ಕಹಾಮದ ಆದೇಶದಂತೆ 2 ರೂಪಾಯಿ ಹೆಚ್ಚಿಸಿ, ನ.25ರಿಂದ 33.05 ರೂ. ಕನಿಷ್ಠ ದರ ಪಾವತಿಯಾಗುತ್ತಿದೆ.

3 ಕೋಟಿ ವಿನಿಯೋಗ

ವಿಶೇಷ ಪ್ರೋತ್ಸಾಹ ಧನಕ್ಕೆ ಒಕ್ಕೂಟವು ಮಾಸಿಕ ಸುಮಾರು 3 ಕೋಟಿ ರೂಪಾಯಿ ವಿನಿಯೋಗಿಸುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ 9ರಿಂದ 10 ಕೋಟಿ ರೂ. ನಷ್ಟವಾಗಲಿದೆ. ಒಕ್ಕೂಟದಲ್ಲಿ 64 ಕೋಟಿಯಷ್ಟು ಅಭಿವೃದ್ಧಿ ನಿಧಿಯಿದ್ದು, ವಾರ್ಷಿಕ 3ರಿಂದ 4 ಕೋಟಿ ಬಡ್ಡಿ ಬರುತ್ತಿದೆ. ಇದನ್ನು ಹಾಲು ಖರೀದಿಗೆ ಬಳಸಿದಲ್ಲಿ ಒಂದು ತಿಂಗಳ ಹಾಲಿನ ಪ್ರೋತ್ಸಾಹ ಧನ ಮಾತ್ರ ನೀಡಲು ಸಾಧ್ಯವಾಗಲಿದೆ. ನಷ್ಟದಿಂದ ಹೊರಬರಲು ವಿಶೇಷ ಪ್ರೋತ್ಸಾಹ ಧನ ಹಿಂಪಡೆಯಲು ಜ.7ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Ashika S

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago