ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಇನಾಯತ್ ಅಲಿ ಬಿರುಸಿ ಪ್ರಚಾರ ಕೈಗೊಂಡಿದ್ದು, ವಿವಿಧ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ಹಮ್ಮಿಕೊಂಡಿದ್ದಾರೆ.
ಶುಕ್ರವಾರ ಮುಚುರ್ ನಲ್ಲಿರುವ ದುರ್ಗಾದಾಸ್ ಶೆಟ್ಟಿ ಅವರ ಮನೆಯಲ್ಲಿ ಸಭೆ ನಡೆಸಿದರು. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದು, ಕಷ್ಟದ ದಿನಗಳಿಗೆ ಮುಕ್ತಿ ದೊರೆಯಲಿದೆ. ಪ್ರಜ್ಞಾವಂತ ಕರಾವಳಿಗರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಅದೇ ರೀತಿ ಗುರುಪುರದ ಸಲಾಂ ಜುಮ್ಮಾ ಮಸೀದಿ ಹಾಗೂ ನೀರುಮಾರ್ಗದ ಮೊಹಿಯುದ್ದೀನ್ ಜುಮ್ಮಾ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮೊದಲು ಬಡಗ ಎಡಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಿದ್ದೀನ್ ಬಾವ ಅವರ ನಿವಾಸದಲ್ಲಿ ಸಭೆ ನಡೆಸಿ, ಬೆಲೆಯೇರಿಕೆ ಸಮಸ್ಯೆಗೆ ಕಾಂಗ್ರೆಸ್ ಗ್ಯಾರಂಟಿ ಪರಿಹಾರ ಒದಗಿಸಲಿದೆ ಎಂದರು.
ಈ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಪದ್ಮನಾಭ, ಸಂತೋಷ, ಶ್ರೀನಾಥ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಕೈಕಂಬದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಲಕ್ಷ್ಮೀ ಶಾ, ಅಮರ್ ಕಾಟಿಪಳ್ಳ, ಪರೀಕ್ಷಿತ್ ಸೇರಿದಂತೆ ಪಕ್ಷ ಸೇರ್ಪಡೆಗೊಂಡರು.