Categories: ಮಂಗಳೂರು

ಮಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಹಿಂದಿ ಭಾಷೆಯಲ್ಲಿ ಆರಂಭ

ಮಂಗಳೂರು: ಅಧಿಕೃತ ಭಾಷಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾದ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಹಿಂದಿ ಭಾಷೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿ ಅಂಶುಲಿ ಆರ್ಯ( ಐಎಎಸ್ ) ಉದ್ಘಾಟಿಸಿದರು.

ಕಾರ್ಯದರ್ಶಿಯವರು ಬ್ಯಾಂಕಿನ ವಾರ್ಷಿಕ ಅಧಿಕೃತ ಭಾಷಾ ಕ್ರಿಯಾ ಯೋಜನೆ 2022-23 ಬಿಡುಗಡೆ ಮಾಡಿದರು. ನವದೆಹಲಿಯಲ್ಲಿ ಗೃಹ ಸಚಿವಾಲಯದ ಸಹಯೋಗದೊಂದಿಗೆ ಬ್ಯಾಂಕ್ ಆಫ್ ಬರೋಡಾ, ನವದೆಹಲಿ ವಲಯ ಕಚೇರಿಯು ಬ್ಯಾಂಕಿನ ಹಿರಿಯ ಕಾರ್ಯನಿರ್ವಾಹಕರಿಗೆ “ತಂತ್ರಜ್ಞಾನದೊಂದಿಗೆ ಅಧಿಕೃತ ಭಾಷೆಯ ಅಭಿವೃದ್ಧಿ” ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಅಂಶುಲಿ ಆರ್ಯ (ಐಎಎಸ್), ಕಾರ್ಯದರ್ಶಿ, ಭಾರತ ಸರ್ಕಾರ, ಗೃಹ ಸಚಿವಾಲಯ, ಅಧಿಕೃತ ಭಾಷಾ ಇಲಾಖೆ ರವರು, ಬ್ಯಾಂಕ್ ಆಯೋಜಿಸಿದ್ದ ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿ ವಲಯದ ಪ್ರಧಾನ ವ್ಯವಸ್ಥಾಪಕ ಮತ್ತು ವಲಯ ಮುಖ್ಯಸ್ಥರಾದ ಅಮಿತ್ ತುಲಿ ವಹಿಸಿದ್ದರು.

ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿ  ಆಗಮಿಸಿದ ಅಂಶುಲಿ ಆರ್ಯ (ಐಎಎಸ್), ಕಾರ್ಯದರ್ಶಿ, ಭಾರತ ಸರ್ಕಾರ, ಅಧಿಕೃತ ಭಾಷಾ ಇಲಾಖೆ ಅವರು ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್‌ನ ಸೇವೆಯನ್ನು ಹಿಂದಿ ಭಾಷೆಯಲ್ಲಿ ಹಾಗೂ ಬ್ಯಾಂಕಿನ 2022-23ರ ವಾರ್ಷಿಕ ಅಧಿಕೃತ ಭಾಷಾ ಕ್ರಿಯಾ ಯೋಜನೆಯನ್ನು ಉದ್ಘಾಟಿಸಿದರು.

ಸಂಜಯ್ ಸಿಂಗ್, (ಅಧಿಕೃತ ಭಾಷೆ ಮತ್ತು ಸಂಸದೀಯ ಸಮಿತಿ) ಮುಖ್ಯಸ್ಥರು ಬ್ಯಾಂಕ್ ಕೈಗೊಂಡ ಅಧಿಕೃತ ಭಾಷಾ ಉಪಕ್ರಮಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿದರು. ನಂತರ ಕಾರ್ಯದರ್ಶಿಯವರು ‘ ಅಧಿಕೃತ ಭಾಷೆ ಅನುಷ್ಠಾನದಲ್ಲಿ ಹಿರಿಯ ಕಾರ್ಯನಿರ್ವಾಹಕರ ಪಾತ್ರ ‘ ವಿಷಯದ ಕುರಿತು ತಮ್ಮ ಮಾರ್ಗದರ್ಶಿ ಭಾಷಣ ನೀಡಿದರು, ಇದರಲ್ಲಿ ಅವರು ಬ್ಯಾಂಕ್ನ ಪ್ರಸ್ತುತಿಯನ್ನು ಶ್ಲಾಘಿಸಿದರು. ಅವರು ವಿಶೇಷವಾಗಿ ಬ್ಯಾಂಕ್‌ನ ‘ ಭಾಷಾಯಿ ಚೌಪಲ್ ‘ ಉಪಕ್ರಮವನ್ನು ಎತ್ತಿ ತೋರಿಸುವುದು ಮತ್ತು ಅಧಿಕೃತ ಭಾಷೆಯಲ್ಲಿ ಗಮನಾರ್ಹ ಕೊಡುಗೆಗಾಗಿ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ನೀಡಬೇಕಾದ ಅಂಕಗಳನ್ನು ಒದಗಿಸುವುದು, ಬ್ಯಾಂಕ್ ಮಾಡಿದ ವಿನೂತನ ಕಾರ್ಯ ಅಧಿಕೃತ ಕ್ಷೇತ್ರದ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ  ಅಮಿತ್ ತುಲಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹಿಂದಿಯನ್ನು ಮನಃಪೂರ್ವಕವಾಗಿ ಅಳವಡಿಸಿಕೊಳ್ಳಲು ಮತ್ತು ಇಂಗ್ಲಿಷ್ ವ್ಯಾಮೋಹವನ್ನು ಹೋಗಲಾಡಿಸಲು ವಿನಂತಿಸಿದರು. ತಾಂತ್ರಿಕ ಅಧಿವೇಶನವನ್ನು ಅಧಿಕೃತ ಭಾಷಾ ಇಲಾಖೆಯ ಉಪ ನಿರ್ದೇಶಕರಾದ  ರಾಜೇಶ್ ಶ್ರೀವಾಸ್ತವ ಮತ್ತು ನವದೆಹಲಿ ವಲಯದ ಮುಖ್ಯ ಪ್ರಬಂಧಕರು (ಅಧಿಕೃತ ಭಾಷೆ)  ಪಂಕಜ್ ಕುಮಾರ್ ವರ್ಮಾ ಅವರು ನಡೆಸಿಕೊಟ್ಟರು.

ಪ್ರಧಾನ ಕಛೇರಿಯ ಅಧಿಕೃತ ಭಾಷಾ ಇಲಾಖೆಯ ಸಹಾಯಕ ಮಹಾ ಪ್ರಬಂಧಕರಾದ  ಪುನೀತ್ ಕುಮಾರ್ ಮಿಶ್ರಾ ಕಾರ್ಯಕ್ರಮವನ್ನು ನಿರ್ವಹಿಸಿದರು. ವಲಯದ ವಿವಿಧ ಶಾಖೆಗಳಲ್ಲಿ ಶಾಖೆಯ ಮುಖ್ಯಸ್ಥರಾಗಿ ನೇಮಕಗೊಂಡ ಕಾರ್ಯನಿರ್ವಾಹಕರು, ವಿಭಾಗಗಳ ಮುಖ್ಯಸ್ಥರು, ನವದೆಹಲಿ ವಲಯದ ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಮುಖ್ಯಸ್ಥರು ಸೇರಿದಂತೆ ಸುಮಾರು 100 ಕ್ಕಿಂತ ಹೆಚ್ಚು ಜನ ಸೆಮಿನಾರ್‌ನಲ್ಲಿ ಭಾಗವಹಿಸಿದ್ದರು.

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

5 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

5 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

5 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

5 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

7 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 hours ago