ಮಂಗಳೂರು: ಎ.18ರಂದು ವಿಶ್ವ ಪರಂಪರೆ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಬಿಜೈ ಶ್ರೀ ಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಮಿತಿ ವತಿಯಿಂದ ವಿಶೇಷ ಚಿತ್ರಕಲೆ (ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆ ಸಂಬಂಧಿತ), ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಕುಮಾರ್ ಚಾಲನೆ ನೀಡಿದರು.
ಪ್ರಭಾಕರ ಕಾಮತ್, ಶಿವಕುಮಾರ್, ಸಂತೋಷ್ ಪ್ರಭು, ಮತ್ತು ವೀಣಾ ಶ್ರೀನಿವಾಸ್ ಅವರು ಸಮಿತಿಯ ಸದಸ್ಯರಾಗಿದ್ದು ತಮ್ಮ ಸಂಗ್ರಹಣೆಗಳಾದ ವಿಶೇಷ ಅಂಚೆ ಚೀಟಿ, ಗಾಂಧೀಜಿಯವರ ಅಂಚೆ ಲಕೋಟೆಗಳು, ಪಾರಂಪರಿಕ ಗೃಹಬಳಕೆ ಸಾಮಗ್ರಿಗಳು, ನಾಣ್ಯಗಳು, ಕರಾವಳಿಯ ಪ್ರಥಮ ಕೈ ಗಡಿಯಾರ ಸಂಗ್ರಹಗಳು, ಕಾವಿಕಲೆಯ ಚಿತ್ರಕಲೆಗಳು, ಹಾಗೂ ಕರಾವಳಿ ಚಿತ್ರ ಕಲಾ ಚಾವಡಿ ಸದಸ್ಯರ ಅಪರೂಪದ ಪಾರಂಪರಿಕ ಚಿತ್ರಕಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅತಿಥಿಗಳಾದ ಅಂಚೆ ಇಲಾಖೆಯ ಎಸ್ಎಸ್ಪಿ ಹರ್ಷ, ಕರ್ನಲ್ ಮಿರಾಜಕರ್ ರವರ ವಿಶೇಷ ಅಂಚೆ ಚೀಟಿ ಲಕೋಟೆಯ ಭಾವಚಿತ್ರವನ್ನು ಬಿಡುಗಡೆಗೊಳಿಸಿದರು.
ಮತದಾನ ಜಾಗೃತಿ ಕುರಿತು ವಿಶೇಷ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು.