ಕಡಬ: ಕಡಬದ ಮೀನಾಡಿಯಲ್ಲಿ ನಡೆದ ಕಾಡಾನೆ ದಾಳಿಯಲ್ಲಿ ಇಬ್ಬರು ಮೃತಪಟ್ಟ ಘಟನೆ ಹಿನ್ನಲೆ, ಕಾಡಾನೆ ಹಿಡಿಯುವ ಕಾರ್ಯಚರಣೆ ಆರಂಭ ಮಾಡಲಾಗಿದೆ.
5 ಸಾಕಾನೆಗಳಿಂದ ಕಾರ್ಯಚರಣೆ ಆರಂಭಗೊಂಡಿದ್ದು, ಅರಣ್ಯ ಅಧಿಕಾರಿಗಳು, ಜಿಲ್ಲಾಡಳಿತದ ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗುತ್ತಿದೆ.
ಡಿಸಿಎಫ್ ದಿನೇಶ್ ವೈ. ಕೆ ನೇತೃತ್ವದಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಸುಳ್ಯ, ಪಂಜ, ಸುಬ್ರಮಣ್ಯ ವಲಯಗಳ ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿಗಳು, ತರಬೇತಿ ಪಡೆದ 30ಆನೆ ಮಾವುತರು ಕಾವಾಡಿಗರ ತಂಡ, ಸ್ಥಳೀಯರು, ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.