ಮಂಗಳೂರು: ಭಾನುವಾರ(ಎಪ್ರಿಲ್ 14) ರಂದು ಕರಾವಳಿಯಲ್ಲಿ ಪ್ರಧಾನಿ ಮೋದಿ ಅವರು ಭರ್ಜರಿಯಾಗಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದರು. ಸಾವಿರಾರು ಜನಸಾಗರ ಅಲ್ಲದೇ ಎಲ್ಲೆಲ್ಲೂ ಮೋದಿ ಜೈಕಾರಕ್ಕೆ ಪುಳಕಿತರಾದ ಮೋದಿ ಕೈ ಬೀಸಿ ತಮ್ಮ ಅಭಿಮಾನವನ್ನು ತೋರಿದ್ದಾರೆ.
ನೂರಾರು ಅಭಿಮಾನಿಗಳ ನಡುವೆ ಕಲಾವಿದನೋರ್ವನ ಕೈಲಿದ್ದ ತಮ್ಮ ಫೋಟೋವನ್ನು ಕಂಡು ಮನಸೋತ ಮೋದಿ ಕಲಾವಿದನಲ್ಲಿ ಫೊಟೋ ಕೇಳಿ ಪಡೆದಿದ್ದಾರೆ. ನೆನ್ನೆ ಮೋದಿ ಮಂಗಳೂರಿಗೆ ಆಗಮಿಸಿದಾಗ ಮೋದಿಗೆ ಕೊಡಲೆಂದು ತೊಕ್ಕೊಟ್ಟು ನಿವಾಸಿ ಯುವ ಕಲಾವಿದ ಕಿರಣ್ ಎಂಬುವವರು ಚಿತ್ರವನ್ನು ಬಿಡಿಸಿದ್ದಾರೆ.
20X24 ಫ್ರೇಮ್ನಲ್ಲಿ ಪ್ರಧಾನಿ ಮೋದಿಯವರ ಆಯಿಲ್ ಪೇಂಟ್ ಚಿತ್ರವನ್ನು ಬಿಡಿಸಿದ್ದು, ರೋಡ್ ಶೋ ವೇಳೆ ತಾನು ಬಿಡಿಸಿದ ಚಿತ್ರವನ್ನು ಮೋದಿ ಎದುರು ಪ್ರದರ್ಶಿಸಿದ್ದಾರೆ. ಈ ವೇಳೆ ಆ ಚಿತ್ರವನ್ನು ಕಂಡ ಮೋದಿ ಮಚ್ಚಿಕೊಂಡು ಅವರಿಗೆ ನೀಡುವಂತೆ ಕೇಳಿದ್ದಾರೆ.ಎಸ್ಪಿಜಿ ಅಧಿಕಾರಿಗಳ ಬಳಿ ಫೋಟೋ ಪಡೆಯುವಂತೆ ಮೋದಿ ಸೂಚನೆ ನೀಡಿದ್ದು, ಅತ್ತ ಪ್ರಧಾನಿ ಫೋಟೋ ಸ್ವೀಕರಿಸಿದಕ್ಕೆ ಕಲಾವಿದ ಕಿರಣ್ ಖುಷಿ ವ್ಯಕ್ತಪಡಿಸಿದ್ದಾರೆ.