ಮಂಗಳೂರು: ರೋಟರಿ ಕ್ಲಬ್ ಮಂಗಳೂರು ರೋಟರಿ ಸಮುದಾಯದಳ ಕುಂಪಲ ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್ ಕುಂಪಲ ಕೇಶವ ಶಿಶು ಮಂದಿರ ಕಿನ್ಯ ಶ್ರೀ ದುರ್ಗಾ ಪರಮೇಶ್ವರಿ ಯುವಕ ಮಂಡಲ ದೇವಿಪುರ ತಲಪಾಡಿ ಆಶ್ರಯದಲ್ಲಿ ವನಮಹೋತ್ಸವ ಹಸಿರೇ ಉಸಿರು ಕಾರ್ಯಕ್ರಮ ನಡೆಯಿತು.
ರಾ.ಸ್ವ ಸೇವಕ ಸಂಘದ ಪರಿಸರ ಸಹ ಪ್ರಾಂತ ಪ್ರಮುಖ್ ಶ್ರೀ ಚಂದ್ರಹಾಸ ಮಾಸ್ಟರ್, ಜಿಲ್ಲಾ ಗತಿವಿದಿ ಪ್ರಮುಖ ಶ್ರೀ ರವಿಚಂದ್ರನ್ ಕುಂಪಲ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾದ ಶ್ರೀ ಡಾ. ಮೋಹನದಾಸ ರೈ, ಶಿಶು ಮಂದಿರ ಅಧ್ಯಕ್ಷರಾದ ಶ್ರೀ ಶಿವರಾಮ ಶೆಟ್ಟಿ ಯಕ್ಷಗಾನ ಕಲಾವಿದರಾದ ಶ್ರೀ ದೇವಿ ಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಶಿಶು ಮಂದಿರ ಸಂಚಾಲಕರಾದ ಶ್ರೀ ನಾರಾಯಣ ಕಜೆ ಸ್ವಾಗತಿಸಿದರು ಸಂಯೋಜಕರಾದ ಶ್ರೀ ನಾರಾಯಣ ಕುಂಪಲ ವನಮಹೋತ್ಸವದ ಅವಶ್ಯಕತೆಯನ್ನು ಹೇಳಿದರು. ಮರಗಳ ನಾಶದಿಂದ ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಗಾಳಿ ನೀರು ಬೆಳಕು ಕಲ್ಪಿಸುವ ನಿಟ್ಟಿನಲ್ಲಿ ವನಮಹೋತ್ಸವ ಪ್ರತಿಯೊಂದು ಮನೆಯಲ್ಲೂ ಆಗಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದೆರಡು ಗಿಡಗಳನ್ನು ನೆಟ್ಟು ಪೋಷಣೆ ಮಾಡೋಣ ಎಂದರು. ಈ ಸಂದರ್ಭದಲ್ಲಿ ವಿವಿಧ ಜಾತಿಯ ಸುಮಾರು ನೂರೈವತ್ತಕ್ಕೂ ಹೆಚ್ಚು ಗಿಡಗಳನ್ನು ಹಂಚಲಾಯಿತು ಶ್ರೀ ಸತೀಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು.