ಮಂಗಳೂರು

ಬಾಹುಬಲಿ ಸ್ವಾಮಿಗೆ ೨೦೨೪ರ ಫೆ. ೨೨ ರಿಂದ ಮಾ.೧ ರವರೆ ಮಹಾಮಜ್ಜನ

ಬೆಳ್ತಂಗಡಿ: ಐತಿಹಾಸಿಕ ವೇಣೂರಿನಲ್ಲಿ ಸ್ಥಾಪಿತವಾಗಿರುವ ಬಾಹುಬಲಿ ಸ್ವಾಮಿಗೆ ೨೦೨೪ರ ಫೆ. ೨೨ ರಿಂದ ಮಾ.೧ ರವರೆ ಮಹಾಮಜ್ಜನ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

ಜೂ. ೨೪ ರಂದು ಅವರು ವೇಣೂರಿನ ಬಾಹುಬಲಿ ಸಭಾಭವನದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಶ್ರಾವಕರ ಸಮಾಲೋಚನಾ ಸಭೆಯಲ್ಲಿ ದಿನಾಂಕದ ಫಲಕವನ್ನು ಅನಾವರಣಗೊಳಿಸುವ ಮೂಲಕ ಪ್ರಕಟಿಸಿದರು.

ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿರುವ ಡಾ| ಹೆಗ್ಗಡೆಯವರು ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಸ್ತಕಾಭಿಷೇಕವು ದಾನಕ್ಕೆ ಪ್ರೇರಣೆ ನೀಡಲು ಇರುವುದು. ಅಲೌಕಿಕವಾಗಿ ಮಾಡುವ ಈ ಕಾರ್ಯದ ಮೂಲಕ ಧರ್ಮದ ಪ್ರಸಾರ, ಪ್ರಚಾರ ಆಗುವುದು. ಮಸ್ತಕಾಭಿಷೇಕದ ನೆನಪಿನಲ್ಲಿ ಹಲವಾರು ಜನಮಂಗಲ ಕಾರ್ಯಗಳು ನಡೆಯುವಂತಾಗಬೇಕು. ವೇಣೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನಹಿತದ ಕಾರ್ಯಗಳನ್ನು ಆಯೋಜಿಸಬೇಕು ಎಂದರು.

೯ ದಿನಗಳ ಕಾಲ ನಡೆಯುವ ಸ್ವಾಮಿಯ ಮಸ್ತಕಾಭಿಷೇಕದ ವ್ಯವಸ್ಥೆಯಲ್ಲಿ ಯುವಜನತೆ ಹೆಚ್ಚಾಗಿ ಪಾಲ್ಗೊಳ್ಳಬೇಕು. ಮಹಿಳೆಯರ ಪಾತ್ರವೂ ಗಣನೀಯವಾಗಿರಬೇಕು. ಇಂದು ಜೈನ ಸಮುದಾಯ ಎಲ್ಲಾ ರೀತಿಯಿಂದಲೂ ಸಶಕ್ತವಾಗಿದೆ. ತನು-ಮನ-ಧನಗಳ ಯಾವುದೇ ಕೊರತೆಯಾಗಲಾರದು. ಹನ್ನೆರಡು ವರ್ಷಗಳ ಬಳಿಕ ನಡೆಯುವ ಈ ಮಜ್ಜನ ಕಾರ್ಯವು ಅಖಿಲ ಕರ್ನಾಟಕ ಮಟ್ಟದ್ದಾಗಿದ್ದು ಹೊಸ ಸ್ಪೂರ್ತಿಯಿಂದ ನೆರವೇರಬೇಕು ಎಂದ ಅವರು ಲೇಸರ್‌ ಇತ್ಯಾದಿ ಆಧುನಿಕ ತಂತ್ರಜ್ಞಾನಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಯಶಸ್ವಿಯಾಗಿಸುವಲ್ಲಿ ಎಲ್ಲರ ಸಹಕಾರ ಅಗತ್ಯದ ಬಗ್ಗೆ ವಿವರಿಸಿದರು.

ಅತಿಥಿಯಾಗಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ ಭೂ ಮಸೂದೆಯಿಂದಾಗಿ ಜೈನ ಸಮುದಾಯ ತತ್ತರಿಸಿತ್ತು. ಆದರೆ ಈಗ ಕೃಷಿಯ ಜೊತೆಗೆ ಇನ್ನಿತರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎತ್ತರಕ್ಕೆ ಬೆಳೆದಿದೆ. ಹೀಗಾಗಿ ಸಮುದಾಯ ಮಾಡುವ ಕಾರ್ಯವು ಯಶಸ್ವಿಯಾಗುವುದು ನಿಶ್ಚಿತ. ಈ ಬಾರಿಯ ಮಸ್ತಕಾಭಿಷೇಕ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಬೇಕು. ಜಗತ್ತಿಗೆ ಶಾಂತಿಯ ಮಹತ್ವವನ್ನು ತಿಳಿಯಪಡಿಸುವಂತಾಗಬೇಕು ಎಂದ ಅವರು ಸರಕಾರಿ ಸಂಪರ್ಕ ಸಮಿತಿಯ ಜವಾಬ್ದಾರಿಯನ್ನು ಸ್ವೀಕರಿಸುವುದಾಗಿ ಪ್ರಕಟಿಸಿದರು.

ಕಾರ್ಕಳ ಜೈನಧರ್ಮ ಜೀರ್ಣೋದ್ಧಾರ ಸಂಘದ ಕಾರ್ಯದರ್ಶಿ, ನ್ಯಾಯವಾದಿ ಎಮ್.ಕೆ. ವಿಜಯಕುಮಾರ್‌ ಅವರು, ಮಸ್ತಕಾಭಿಷೇಕದ ಮೂಲಕ ಜೈನರ ಸಂಸ್ಕಾರ, ಸಂಸ್ಕೃತಿ, ನಡೆ, ನುಡಿಯ ಪರಿಚಯ ಸಮಗ್ರ ಸಮಾಜಕ್ಕೆ ಆಗಬೇಕಲ್ಲದೆ ಜೈನ ಸಮುದಾಯಕ್ಕೂ ಗೌರವ ತರುವಂತಾಗಬೇಕು. ಹೆಗ್ಗಡೆಯವರ ನೇತೃತ್ವ ಮಹಾಮಸ್ತಕಾಭಿಷೇಕಕ್ಕೆ ಇರುವುದರಿಂದ ಇದು ಅತ್ಯಂತ ಯಶಸ್ವಿಯಾಗುವುದು ನಿಶ್ಚಿತ ಎಂದರು.

ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ್‌ ಕಾರ್ಯನಿರ್ವಹಿಸಲಿದ್ದು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿರುವ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಸ್ವಾಗತಿಸಿದರು. ಮಹಾವೀರ ಜೈನ್‌ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಉಪಸಮಿತಿಗಳ ಮಾಹಿತಿಯನ್ನು ನೀಡಲಾಯಿತು. ಮಹಾಮಸ್ತಕಾಭಿಷೇಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಬಗ್ಗೆ, ಹಗಲಲ್ಲಿ ಮಸ್ತಕಾಭಿಷೇಕ ನೆರವೇರಿಸುವ ಬಗ್ಗೆ, ಅಭಿಷೇಕ ನೋಡಲು ಮೂರ್ತಿಯ ಸುತ್ತ ಅಟ್ಟೊಳಿಗೆ ನಿರ್ಮಿಸುವ ಬಗ್ಗೆ ಇತ್ಯಾದಿ ಸಲಹೆ ಸೂಚನೆಗಳು ಸಭೆಯಲ್ಲಿ ವ್ಯಕ್ತವಾದವು.

ಚಾವುಂಡವಂಶದ ತಿಮ್ಮರಾಜನಿಂದ ೧೬೦೪ ರಲ್ಲಿ ಸ್ಥಾಪಿತವಾದ ೩೫ ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ೧೯೨೮, ೧೯೫೬, ೨೦೦೦ ಹಾಗೂ ೨೦೧೨ ರಲ್ಲಿ ಮಹಾಮಸ್ತಕಾಭಿಷೇಕಗಳು ನಡೆದಿದ್ದು ಇದೀಗ ೨೦೨೪ರಲ್ಲಿ ನಡೆಯಲಿದೆ. ಮಹಾಮಜ್ಜನದ ಯಶಸ್ವಿಗೆ ೨೭ ಉಪ ಸಮಿತಿಗಳನ್ನು ರಚಿಸಲಾಗಿದೆ.

Gayathri SG

Recent Posts

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

19 mins ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

44 mins ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

2 hours ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

2 hours ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

3 hours ago